ಹನುಮಾನ್ ಚಾಲೀಸಾ

ಹನುಮಾನ್ ಚಾಲೀಸಾ

ಶ್ರೀಗುರು ಚರನ ಸರೋಜ ರಜ ನಿಜ ಮನ ಮುಕುರ ಸುಧಾರಿ .

ಬರನಉಂ ರಘುಬರ ಬಿಮಲ ಜಸ ಜೋ ದಾಯಕ ಫಲ ಚಾರಿ .

ನನ್ನನ್ನು ನಾನು ನನ್ನ ಗುರುವಿನ ಪಾದದೂಳಿನಿಂದ ಪವಿತ್ರಗೊಳಿಸಿಕೊಂಡ ಮೇಲೆ, ನಾನು ಸದ್ಗುಣಗಳು, ಐಶ್ವರ್ಯ, ಬಯಕೆಗಳ ಸಾಧಿಸಿವಿಕೆ ಮತ್ತು ಮೋಕ್ಷಗಳನ್ನು ದಯಪಾಲಿಸುವ ಶ್ರೀರಾಮನ ಹಿರಿಮೆಯನ್ನು ವರ್ಣಿಸುತ್ತೇನೆ.

ಬುದ್ಧಿ ಹೀನ ತನು ಜಾನಿಕೈ ಸುಮಿರೌಂ ಪವನಕುಮಾರ .

ಬಲ ಬುಧಿ ಬಿದ್ಯಾ ದೇಹು ಮೋಹಿಂ ಹರಹು ಕಲೇಶ ಬಿಕಾರ .

ನಾನಷ್ಟು ಬುದ್ಧಿವಂತನಲ್ಲ. ಹನುಮ,  ಆದರೆ ನನಗೆ ನಿನ್ನ ನೆನಪಿದೆ. ನನಗೆ ಶಕ್ತಿಕೊಡು. ನನಗೆ ಜ್ಞಾನ ಕೊಡು. ನನ್ನ ಎಲ್ಲಾ ಸಮಸ್ಯೆಗಳನ್ನು ತೆಗೆದು ಹಾಕು.

ಜಯ ಹನುಮಾನ ಜ್ಞಾನ ಗುಣ ಸಾಗರ .

ಜಯ ಕಪೀಶ ತಿಹುಂ ಲೋಕ ಉಜಾಗರ ..1..

ನಿನಗೆ ಅಪರಿಮಿತ ಜ್ಞಾನವಿದೆ. ನಿನ್ನಲ್ಲಿ ಅಪ್ರತಿಮವಾದ ಉತ್ತಮ ಗುಣಗಳಿವೆ. ನೀನು ವಾನರರಲ್ಲಿಯೇ ಉತ್ತಮನಾದವನು. ನೀನು ಮೂರು ಲೋಕಗಳಲ್ಲಿಯೂ ಹೆಸರುವಾಸಿಯಾದವನು. ನಿನಗೆ ಜಯವಾಗಲಿ.

ರಾಮ ದೂತ ಅತುಲಿತ ಬಲ ಧಾಮಾ .

ಅಂಜನಿಪುತ್ರ ಪವನಸುತ ನಾಮಾ ..2..

ನೀನು ಶ್ರೀರಾಮನ ದೂತ. ನಿನ್ನ ಬಲಕ್ಕೆ ಯಾರೂ ಸಮಾನರಲ್ಲ. ಅಂಜನಿಪುತ್ರ ಮತ್ತು ಪವನಸುತ ಎಂಬ ನಿನ್ನ ಎರಡು ಹೆಸರುಗಳು ತುಂಬಾ ಪ್ರಸಿದ್ಧಿಯಾಗಿವೆ.

ಮಹಾಬೀರ ಬಿಕ್ರಮ ಬಜರಂಗೀ .

ಕುಮತಿ ನಿವಾರ ಸುಮತಿ ಕೇ ಸಂಗೀ ..3..

ನೀನು ಬಹಳ ಪರಾಕ್ರಮಿ. ನಿನ್ನ ದೇಹವು ವಜ್ರದಂತೆ ಕಠಿಣವಾಗಿದೆ. ನೀನು ಕೆಟ್ಟ ಆಲೋಚನೆಗಳನ್ನು ನಾಶ ಮಾಡುವೆ. ನಿನ್ನ ಭಕ್ತರಿಗೆ ನೀನು ಸದಾ ಸಹಾಯಮಾಡುವೆ.

ಕಂಚನ ಬರನ ಬಿರಾಜ ಸುಬೇಸಾ .

ಕಾನನ ಕುಂಡಲ ಕುಂಚಿತ ಕೇಸಾ ..4..

ನಿನ್ನ ದೇಹವು ಸುವರ್ಣವರ್ಣದಲ್ಲಿದೆ. ನಿನ್ನ ಉಡುಗೆಗಳು ಸುಂದರವಾಗಿವೆ. ನೀನು ಅದ್ಭುತವಾದ ಕಿವಿಯ ಆಭರಣಗಳನ್ನು ಧರಿಸಿರುವೆ. ನಿನ್ನ ಕೇಶವು ಗುಂಗುರಾಗಿದೆ.

ಹಾಥ ಬಜ್ರ ಅರು ಧ್ವಜಾ ಬಿರಾಜೈ .

ಕಾಂಧೇ ಮೂಂಜ ಜನೇಊ ಛಾಜೈ ..5..

ನೀನು ಶ್ರೀರಾಮನ ಧ್ವಜವನ್ನು ನಿನ್ನ ಕೈಗಳಲ್ಲಿ ಹಿಡಿದಿರುವೆ. ನೀನು ಯಜ್ಞೋಪವೀತವನ್ನು ಧರಿಸಿರುವೆ. ನೀನು ಸ್ವಯಂ

ಶಂಕರ ಸುವನ  ಕೇಸರೀನಂದನ .

ತೇಜ ಪ್ರತಾಪ ಮಹಾ ಜಗ ಬಂದನ ..6..

ನೀನು ಸ್ವತಃ ಭಗವಾನ್ ಶಂಕರ. ನೀನು ಕೇಸರಿಯ ಪುತ್ರ. ನಿನ್ನ ತೇಜಸ್ಸು ಅದ್ಭುತವಾಗಿದೆ. ಇಡೀ ವಿಶ್ವವು ನಿನಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತದೆ.

ಬಿದ್ಯಾವಾನ ಗುಣೀ ಅತಿ ಚಾತುರ .

ರಾಮ ಕಾಜ ಕರಿಬೇ ಕೋ ಆತುರ ..7..

ನೀನು ಎಲ್ಲವನ್ನೂ ತಿಳಿದವನು. ನಿನ್ನಲ್ಲಿ ಎಲ್ಲಾ ಗುಣಗಳೂ ಇವೆ. ನೀನು ಶ್ರೀರಾಮನ ಕೆಲಸಗಳನ್ನು ಮಾಡಲು ಉತ್ಸುಕನಾಗಿರುವೆ.

ಪ್ರಭು ಚರಿತ್ರ ಸುನಿಬೇ ಕೋ ರಸಿಯಾ .

ರಾಮ ಲಖನ ಸೀತಾ ಮನ ಬಸಿಯಾ ..8..

ನೀನು ಶ್ರೀರಾಮನ ಶೌರ್ಯದ ಕಾರ್ಯಗಳ ಬಗ್ಗೆ ತಿಳಿಯಲು ಇಚ್ಚಿಸುವೆ. ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆ ಎಲ್ಲರೂ ನಿನ್ನ ಬಗ್ಗೆಯೇ ಯಾವಾಗಲೂ ಯೋಚಿಸುತ್ತಾರೆ.

ಸೂಕ್ಷ್ಮ ರೂಪ ಧರಿ ಸಿಯಹಿಂ ದಿಖಾವಾ .

ಬಿಕಟ ರೂಪ ಧರಿ ಲಂಕ ಜರಾವಾ ..9..

ನೀನೊಂದು ಚಿಕ್ಕರೂಪವನ್ನು ಧರಿಸಿ, ಸೀತಾಮಾತೆಯು ಎಲ್ಲಿರುವರೆಂದು ಕಂಡು ಹಿಡಿದೆ. ನೀನು ಉಗ್ರರೂಪವನ್ನು ತಾಳಿ ಲಂಕೆಯನ್ನು ಸುಟ್ಟುಬಿಟ್ಟೆ.

ಭೀಮ ರೂಪ ಧರಿ ಅಸುರ ಸಂಹಾರೇ .

ರಾಮಚಂದ್ರ ಕೇ ಕಾಜ ಸಂವಾರೇ ..10..

ಬೃಹತ್ ಆಕಾರವನ್ನು ಧಾರಣೆಮಾಡಿ, ನೀನು ಅಸುರರನ್ನು ಕೊಂದೆ ಮತ್ತು ಶ್ರೀರಾಮನ ಆಜ್ಞೆ ಯನ್ನು  ನೆರವೇರಿಸಿದೆ.

ಲಾಯ ಸಂಜೀವನಿ ಲಖನ ಜಿಯಾಯೇ .

ಶ್ರೀರಘುಬೀರ ಹರಷಿ ಉರ ಲಾಯೇ ..11..

ನೀನು ಸಂಜೀವಿನಿಯನ್ನು ತಂದೆ ಮತ್ತು ಲಕ್ಷ್ಮಣನನ್ನು ಬದುಕಿಸಿದೆ. ಶ್ರೀರಾಮನು ಸಂತೋಷಗೊಂಡಾಗ ನೀನೂ ಸಂತೋಷಪಡುವೆ.

ರಘುಪತಿ ಕೀನ್ಹೀ ಬಹುತ ಬಡಾಈ .

ತುಮ ಮಮ ಪ್ರಿಯ ಭರತಹಿಂ ಸಮ ಭಾಈ ..12.

ಶ್ರೀರಾಮನು ನಿನ್ನನ್ನು ಹೊಗಳುತ್ತಲೇ ಇರುವನು. ನೀನು ಅವನ ಸಹೋದರ ಭರತನಂತೆ ಎಂದು ಅವನು ಹೇಳುತ್ತಾನೆ.

ಸಹಸ ಬದನ ತುಮ್ಹರೋ ಜಸ ಗಾವೈಂ .

ಅಸ ಕಹಿ ಶ್ರೀಪತಿ ಕಂಠ ಲಗಾವೈಂ ..13..

ಶ್ರೀರಾಮನು, ನಿನ್ನನ್ನು ಆದಿಶೇಷನು ಕೂಡ ತನ್ನ ಸಾವಿರ ಶಿರಗಳಿಂದ ನಿನ್ನ ಹೊಗಳಿಕೆಯನ್ನು ಹಾಡುತ್ತಾನೆ ಎಂದು ನಿನ್ನನ್ನು ಮತ್ತೆಮತ್ತೆ ಆಲಂಗಿಸಿಕೊಳ್ಳುತ್ತಾನೆ.

ಸನಕಾದಿಕ ಬ್ರಹ್ಮಾದಿ ಮುನೀಶಾ .

ನಾರದ ಸಾರದ ಸಹಿತ ಅಹೀಶಾ ..14..

ನಿನ್ನನ್ನು ಸನಕ, ಬ್ರಹ್ಮ, ನಾರದ ಮತ್ತು ಸರಸ್ವತಿಯಂತವರೂ ಕೂಡ ಹೊಗಳುತ್ತಾರೆ.

ಜಮ ಕುಬೇರ ದಿಗಪಾಲ ಜಹಾಂ ತೇ .

ಕಬಿ ಕೋಬಿದ ಕಹಿ ಸಕೈಂ ಕಹಾಂ ತೇ ..15..

ಯಮ, ಕುಬೇರ ಮತ್ತು ದಿಕ್ಪಾಲಕರೇ ನಿನ್ನ ಅಂತ್ಯವಿಲ್ಲದ ಕೀರ್ತಿಯನ್ನು ಹಾಡುವಾಗ, ಇನ್ನು ಕವಿಗಳು ಮತ್ತು ವಿದ್ವಾಂಸರುಗಳು ಏನನ್ನು ತಾನೇ ಕೊಡಬಲ್ಲರು?

ತುಮ ಉಪಕಾರ ಸುಗ್ರೀವಹಿಂ ಕೀನ್ಹಾ .

ರಾಮ ಮಿಲಾಯ ರಾಜ-ಪದ ದೀನ್ಹಾ ..16..

ನೀನು ಸುಗ್ರೀವನನ್ನು ಶ್ರೀರಾಮನೊಂದಿಗೆ ಭೇಟಿ ಮಾಡಿಸಿದೆ. ಇದರಿಂದಾಗಿ ಸುಗ್ರೀವನು ಕಿಷ್ಕಿಂದೆಯ ರಾಜಪಟ್ಟವನ್ನು ಗಳಿಸಿದ.

ತುಮ್ಹರೋ ಮಂತ್ರ ಬಿಭೀಷನ ಮಾನಾ .

ಲಂಕೇಶ್ವರ ಭಏ ಸಬ ಜಗ ಜಾನಾ ..17..

ವಿಭೀಷಣನು ಶ್ರೀರಾಮನ ಬಗ್ಗೆ ನಿನ್ನ ಭಕ್ತಿಯನ್ನು ಅನುಸರಿಸಿದ. ಇದರಿಂದಾಗಿ ಅವನು ಲಂಕೆಯ ರಾಜನಾದ.

ಜುಗ ಸಹಸ್ರ ಜೋಜನ ಪರ ಭಾನೂ .

ಲೀಲ್ಯೋ ತಾಹಿ ಮಧುರ ಫಲ ಜಾನೂ ..18..

ನೀನು ಒಮ್ಮೆ ಸೂರ್ಯನನ್ನು ಹಣ್ಣೆಂದು ಭಾವಿಸಿ ಅದನ್ನು ನುಂಗಲು ಪ್ರಯತ್ನಿಸಿದೆ.

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀಂ .

ಜಲಧಿ ಲಾಂಘಿ ಗಯೇ ಅಚರಜ ನಾಹೀಂ ..19..

ಶ್ರೀ ರಾಮನ ಹೆಸರಿದ್ದ ಉಂಗುರವನ್ನು ತೆಗೆದುಕೊಂಡು ನೀನು ಸಾಗರವನ್ನು ದಾಟಿದೆ.

ದುರ್ಗಮ ಕಾಜ ಜಗತ ಕೇ ಜೇ ತೇ .

ಸುಗಮ ಅನುಗ್ರಹ ತುಮ್ಹರೇ ತೇ ತೇ ..20..

ಎಲ್ಲಾ ಕಠಿಣ ಕಾರ್ಯಗಳನ್ನು ನಿನ್ನ ಆಶೀರ್ವಾದದಿಂದ ಸುಲಭವಾಗಿ ಸಾಧಿಸಬಹುದು.

ರಾಮ ದುಆರೇ ತುಮ ರಖವಾರೇ .

ಹೋತ ನ ಆಜ್ಞಾ ಬಿನು ಪೈಸಾರೇ ..21..

ನೀನು ಶ್ರೀರಾಮನ ಅರಮನೆಯ ಮಹಾದ್ವಾರವನ್ನು ಕಾಯುವೆ. ನಿನ್ನ ಅನುಮತಿಯಿಲ್ಲದೇ ಯಾರೂ ಒಳಗೆ ಹೋಗಲಾರರು.

ಸಬ ಮುಖ ಲಹಹಿಂ ತುಮ್ಹಾರೀ ಶರನಾ .

ತುಮ ರಕ್ಷಕ ಕಾಹೂ ಕೋ ಡರ ನಾ ..22..

ಯಾರು ನಿನ್ನನ್ನು ಆಶ್ರಯಿಸುತ್ತಾರೆ, ಅವರು ಎಲ್ಲಾ ಸುಖವನ್ನೂ ಹೊಂದುತ್ತಾರೆ. ಅವರು ಯಾವುದಕ್ಕೂ ಹೆದರುವುದಿಲ್ಲ.

ಆಪನ ತೇಜ ಸಮ್ಹಾರೋ ಆಪೇ .

ತೀನೌಂ ಲೋಕ ಹಾಂಕ ತೇ ಕಾಂಪೇ ..23..

ನಿನ್ನ ಕಾಂತಿಯನ್ನು ನೋಡಿ ಮೂರು ಲೋಕದವರೂ ನಡುಗುತ್ತಾರೆ.

ಭೂತ ಪಿಶಾಚ ನಿಕಟ ನಹೀಂ ಆವೈ .

ಮಹಾಬೀರ ಜಬ ನಾಮ ಸುನಾವೈ ..24..

ನಿನ್ನ ಹೆಸರನ್ನು ಕೇಳಿದರೆ, ದುಷ್ಟ ಶಕ್ತಿಗಳು ನಿನ್ನ ಬಳಿ ಸುಳಿಯಲು ಧೈರ್ಯ ಮಾಡುವುದಿಲ್ಲ.

ನಾಸೈ ರೋಗ ಹರೈ ಸಬ ಪೀರಾ .

ಜಪತ ನಿರಂತರ ಹನುಮತ ಬೀರಾ ..25..

ನಿನ್ನ ಭಕ್ತರು ನಿನ್ನ ನಾಮಸ್ಮರಣೆ ಮಾಡಿದಾಗ, ನೀನು ಅವರ ಕಾಯಿಲೆಯನ್ನು ಗುಣಪಡಿಸುವೆ.

ಸಂಕಟ ತೇಂ ಹನುಮಾನ ಛುಡಾವೈ .

ಮನ ಕ್ರಮ ಬಚನ ಧ್ಯಾನ ಜೋ ಲಾವೈಂ ..26..

ಹನುಮನನ್ನು ಮನಸ್ಸಿನಿಂದ, ಮಾತುಗಳಿಂದ ಅಥವಾ ಕೆಲಸಗಳಿಂದ ನೆನಸಿಕೊಂಡರೆ, ಅವನು ಎಲ್ಲಾ ತೊಂದರೆಗಳನ್ನು ಪರಿಹರಿಸುತ್ತಾನೆ.

ಸಬ ಪರ ರಾಮ ರಾಯ ಸಿರತಾಜಾ .

ತಿನ ಕೇ ಕಾಜ ಸಕಲ ತುಮ ಸಾಜಾ ..27..

ಶ್ರೀರಾಮನು ರಾಜರುಗಳಲ್ಲಿಯೇ ಅಪ್ರತಿಮನು. ನೀನು ಅವನ ಎಲ್ಲಾ ಕೆಲಸಗಳನ್ನು ಸಾಧಿಸಿರುವೆ.

ಔರ ಮನೋರಥ ಜೋ ಕೋಇ ಲಾವೈ .

ತಾಸು ಅಮಿತ ಜೀವನ ಫಲ ಪಾವೈ ..28..

ಭಕ್ತರು ತಮ್ಮ ಕೋರಿಕೆಗಳೊಂದಿಗೆ ನಿನ್ನ ಬಳಿ ಬರುತ್ತಾರೆ. ನೀನು ಅವುಗಳೆಲ್ಲವನ್ನೂ ಪೂರೈಸುವೆ.

ಚಾರಿಉ ಜುಗ ಪರತಾಪ ತುಮ್ಹಾರಾ .

ಹೈ ಪರಸಿದ್ಧ ಜಗತ ಉಜಿಯಾರಾ ..29..

ನಿನ್ನ ಕಾಂತಿಯು ನಾಲ್ಕು ಯುಗಗಳಲ್ಲಿಯೂ ಪ್ರಸಿದ್ಧಿಯಾಗಿದೆ. ಅದು ಪ್ರಪಂಚದ ಎಲ್ಲಾ ಕಡೆಯು ಹರಡಿದೆ.

ಸಾಧು ಸಂತ ಕೇ ತುಮ ರಖವಾರೇ .

ಅಸುರ ನಿಕಂದನ ರಾಮ ದುಲಾರೇ ..30..

ನೀನು ರಾಕ್ಷಸರನ್ನು ನಾಶಮಾಡಿರುವೆ. ನೀನು ಋಷಿಗಳ ರಕ್ಷಕ.

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ .

ಅಸ ಬರ ದೀನ್ಹ ಜಾನಕೀ ಮಾತಾ ..31..

ನೀನು ಎಂಟು ಸಿದ್ಧಿಗಳನ್ನು ಅನುಗ್ರಹಿಸುವೆ. ಒಂಬತ್ತು ಐಶ್ವರ್ಯಗಳಿಂದ ಆಶೀರ್ವದಿಸುವೆ. ಸೀತಾಮಾತೆಯು ನಿನಗೆ ಈ ವರವನ್ನು ನೀಡಿದ್ದಾರೆ.

ರಾಮ ರಸಾಯನ ತುಮ್ಹರೇ ಪಾಸಾ .

ಸಾದರ ಹೌ ರಘುಪತಿ ಕೇ ದಾಸಾ ..32..

ನೀನು ಶ್ರೀರಾಮನನ್ನು ತುಂಬಾ ಪ್ರೀತಿಸುವೆ. ನೀನು ಅವನ ಸೇವಕನೆಂದು ಭಾವಿಸಿರುವೆ.

ತುಮ್ಹರೇ ಭಜನ ರಾಮ ಕೋ ಪಾವೈ .

ಜನಮ ಜನಮ ಕೇ ದುಖ ಬಿಸರಾವೈ ..33..

ನಿನ್ನನ್ನು  ಪ್ರಾರ್ಥಿಸುವುದರಿಂದ, ಶ್ರೀರಾಮನನ್ನು ಒಲಿಸಿಕೊಳ್ಳಬಹುದು. ಒಮ್ಮೆ ಶ್ರೀರಾಮನನ್ನು ಒಲಿಸಿಕೊಂಡರೆ, ಎಷ್ಟೋ ಜನ್ಮಗಳ ದುಃಖವನ್ನು ಮರೆಯಬಹುದು.

ಅಂತ ಕಾಲ ರಘುಬರ ಪುರ ಜಾಈ .

ಜಹಾಂ ಜನ್ಮ ಹರಿ ಭಗತ ಕಹಾಈ ..34..

ನಿನ್ನನ್ನು ಕುರಿತು ಯಾರೆಲ್ಲಾ ಪ್ರಾರ್ಥಿಸುವರೋ, ಅವರನ್ನು ಶ್ರೀರಾಮನ ಭಕ್ತರೆಂದು ಕರೆಯಲ್ಪಡುತ್ತಾರೆ. ಅವರು ಶ್ರೀರಾಮನ ಸಾನಿಧ್ಯವನ್ನು ಹೊಂದುತ್ತಾರೆ.

ಔರ ದೇವತಾ ಚಿತ್ತ ನ ಧರಈ .

ಹನುಮತ ಸೇಇ ಸರ್ಬ ಸುಖ ಕರಈ ..35..

ಒಂದು ವೇಳೆ ನೀವು ಬೇರೆ ದೇವರುಗಳನ್ನು ನೆನೆಯದಿದ್ದರೂ, ಹನುಮನನ್ನು ಪ್ರಾರ್ಥಿಸಿದರೆ ನಿಮಗೆ ಸಂತೋಷ ಮತ್ತು ಸುಖವು ದೊರೆಯುತ್ತದೆ.

ಸಂಕಟ ಕಟೈ ಮಿಟೈ ಸಬ ಪೀರಾ .

ಜೋ ಸುಮಿರೈ ಹನುಮತ ಬಲಬೀರಾ ..36..

ಹನುಮನನ್ನು ನೆನಸಿದರೆ, ಎಲ್ಲಾ ತೊಂದರೆಗಳು ಹೊರಟು ಹೋಗುತ್ತವೆ. ಅವರ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ.

ಜಯ ಜಯ ಜಯ ಹನುಮಾನ ಗೋಸಾಈಂ .

ಕೃಪಾ ಕರಹು ಗುರುದೇವ ಕೀ ನಾಈಂ ..37..

ಹನುಮನಿಗೆ ಜಯವಾಗಲಿ. ನನ್ನ ಗುರುವಿನಂತೆ ನನ್ನ ಮೇಲೆ ಕರುಣೆಯನ್ನು ತೋರಿಸಿ.

ಜೋ ಶತ ಬಾರ ಪಾಠ ಕರ ಕೋಈ .

ಛೂಟಹಿಂ ಬಂದಿ ಮಹಾ ಸುಖ ಹೋಈ ..38..

ಹನುಮಾನ್ ಚಾಲೀಸಾವನ್ನು ಯಾರು ನೂರು ಬಾರಿ ಓದುವರೋ ಅವರನ್ನು ಎಲ್ಲಾ ಬಂಧನಗಳಿಂದ ವಿಮುಕ್ತಗೊಳಿಸಲಾಗುವುದು. ಅವರು ಅತ್ಯಧಿಕ ಆನಂದವನ್ನು ಹೊಂದುವರು.

ಜೋ ಯಹ ಪಢೈಂ ಹನುಮಾನ ಚಾಲೀಸಾ .

ಹೋಯ ಸಿದ್ಧಿ ಸಾಖೀ ಗೌರೀಸಾ ..39..

ನೀವು ಹನುಮಾನ್ ಚಾಲೀಸವನ್ನು ಪ್ರತಿದಿನ ಓದಿದರೆ, ಯಶಸ್ಸನ್ನು ಹೊಂದುವಿರಿ. ಭಗವಾನ್ ಶಿವ ಇದನ್ನು ಸಮರ್ಥಿಸುತ್ತಾನೆ.

ತುಳಸೀದಾಸ ಸದಾ ಹರಿ ಚೇರಾ .

ಕೀಜೈ ನಾಥ ಹೃದಯ ಮಹಂ ಡೇರಾ ..40..

ಓಹ್! ಹನುಮ, ನೀನು ಶಾಶ್ವತವಾಗಿ ಶ್ರೀರಾಮನ ಸೇವೆ ಮಾಡುವೆ. ದಯಮಾಡಿ ನನ್ನ (ತುಳಸಿದಾಸ) ಹೃದಯದಲ್ಲಿ ನೆಲಸು.

ಪವನ ತನಯ ಸಂಕಟ ಹರನ ಮಂಗಲ ಮೂರತಿ ರೂಪ .

ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ..

ಎಲ್ಲಾ ತೊಂದರೆಗಳನ್ನು ಪರಿಹರಿಸುವವನು ನೀನು. ನೀನು ಅಷ್ಟು ಮಂಗಳಕರವಾದವನು. ದಯವಿಟ್ಟು ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆಯರೊಂದಿಗೆ ನನ್ನ ಹೃದಯದಲ್ಲಿ ನೆಲಸು.

Ramaswamy Sastry and Vighnesh Ghanapaathi

Other stotras

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies