ತಾರಾದೇವಿ

ತಾರಾದೇವಿ

ದಶ ಮಹಾವಿದ್ಯಗಳಲ್ಲಿ ತಾರಾದೇವಿ ಎರಡನೆಯವಳು. ರೂಪದಲ್ಲಿ ಉಗ್ರವಾಗಿದ್ದರೂ, ಅವಳು ತನ್ನ ಮಾತೃವಾತ್ಸಲ್ಯಕ್ಕೆ ಹೆಸರುವಾಸಿಯಾಗಿದ್ದಾಳೆ. ತಾರಾ ದುಷ್ಟ ಶಕ್ತಿಗಳನ್ನು ತೀವ್ರವಾಗಿ ನಿಗ್ರಹಿಸುತ್ತಾಳೆ ಮತ್ತು ತಾಯಿಯಂತೆ ತನ್ನ ಭಕ್ತರನ್ನು ಪ್ರೀತಿಯಿಂದ ರಕ್ಷಿಸುತ್ತಾಳೆ. 'ತಾರಾ' ಎಂಬ ಹೆಸರಿನ ಅರ್ಥ 'ದಾಟಲು ಸಹಾಯ ಮಾಡುವವಳು' - ಭಕ್ತರನ್ನು ಸಂಸಾರ ಸಾಗರದಾದ್ಯಂತ ಕರೆದೊಯ್ಯುವವಳು. ರಾತ್ರಿಯಿಡೀ ನಕ್ಷತ್ರ (ತಾರಾ) ನಾವಿಕರಿಗೆ ಮಾರ್ಗದರ್ಶನ ನೀಡುವಂತೆಯೇ, ದೇವಿಯೂ ತನ್ನ ಭಕ್ತರನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಾಳೆ.
ಕ್ಷೀರ ಸಾಗರ ಮಂಥನದ ಸಮಯದಲ್ಲಿ, ಮಾರಕ ವಿಷ ಹೊರಹೊಮ್ಮಿದಾಗ, ಶಿವನು ವಿಶ್ವವನ್ನು ರಕ್ಷಿಸಲು ಅದನ್ನು ಕುಡಿದನು. ಪಾರ್ವತಿ ದೇವಿ ಶಿವನ ಗಂಟಲಿನಲ್ಲಿ ವಿಷವನ್ನು ನಿಲ್ಲಿಸಿದರೂ, ಅದು ಈಗಾಗಲೇ ಒಳಗೆ ಹರಡಿತ್ತು. ಆ ಕ್ಷಣದಲ್ಲಿ, ತಾರಾ ಶಿವನನ್ನು ಶಿಶುವನ್ನಾಗಿ ಮಾಡಿ, ಅವನನ್ನು ತನ್ನ ಮಡಿಲಲ್ಲಿ ತೆಗೆದುಕೊಂಡು ಅವನಿಗೆ ಹಾಲುಣಿಸಿದಳು. ಅವಳ ಹಾಲು ವಿಷವನ್ನು ತಟಸ್ಥಗೊಳಿಸಿತು ಎಂದು ವೇದಗಳು ಹೇಳುತ್ತವೆ - ದಶಾಸ್ಯಾಂ ಪುತ್ರಾನಾಧೇಹಿ ಪತಿಮೇಕಾದಶಂ ಕೃಧಿ - ಮದುವೆಯಾದ ವರ್ಷಗಳ ನಂತರ, ಹೆಂಡತಿಯು ತನ್ನ ಗಂಡನ ಮೇಲೆ ತಾಯಿಯ ವಾತ್ಸಲ್ಯವನ್ನು ಬೆಳೆಸಿಕೊಳ್ಳುತ್ತಾಳೆ.
ದಕ್ಷ ಯಾಗದ ಸಮಯದಲ್ಲಿ ಸತಿ ದೇವಿಯ ಉಗ್ರ ದೇಹದಿಂದ ದಶ ಮಹಾವಿದ್ಯಗಳು ಹೊರಹೊಮ್ಮಿದವು.

ಉಗ್ರತೆಯಲ್ಲಿ, ತಾರಾ ಕಾಳಿಗೆ ಸಮಾನಳು. ಕಾಳಿಯ ಚಿತ್ರಣಗಳಂತೆ, ತಾರಾ ಕೂಡ ಶಿವನ ನಿರ್ಜೀವ ದೇಹದ ಮೇಲೆ ನಿಂತಿರುವುದನ್ನು ತೋರಿಸಲಾಗಿದೆ - ಇದು ಅವಳಿಲ್ಲದೆ (ಶಕ್ತಿ) ಶಿವ ನಿರ್ಜೀವ ಎಂಬುದನ್ನು ಸಂಕೇತಿಸುತ್ತದೆ.

ಕಾಳಿಯ ಕೂದಲು ಒರಟು ಮತ್ತು ಕೆದರಿದಂತಿದ್ದರೆ, ತಾರಾಳ ಕೂದಲನ್ನು ಒಂದೇ ಜಡೆ ಅಥವಾ ಜಟದಲ್ಲಿ ಕಟ್ಟಲಾಗಿದೆ - ಆದ್ದರಿಂದ ಅವಳನ್ನು ಏಕಜಟಾ ಎಂದೂ ಕರೆಯುತ್ತಾರೆ. ಕಾಳಿಯು ತೆಳ್ಳಗಿನ, ಸಣಕಲು ದೇಹವನ್ನು ಹೊಂದಿದ್ದಾಳೆ, ಆದರೆ ತಾರಾ ಗರ್ಭಿಣಿ ತಾಯಿಯಂತೆ ದುಂಡಗಿನ ಹೊಟ್ಟೆಯನ್ನು ಹೊಂದಿದ್ದಾಳೆ - ಇದು ಎಲ್ಲಾ ಜೀವಿಗಳ ಮೇಲಿನ ಅವಳ ಆಳವಾದ ತಾಯಿಯ ಪ್ರೀತಿಯನ್ನು ಸಂಕೇತಿಸುತ್ತದೆ.

ಕಾಳಿ ಕಪ್ಪು ಬಣ್ಣ; ತಾರಾ ನೀಲಿ. ಅದಕ್ಕಾಗಿಯೇ ಅವಳನ್ನು ನೀಲ ಸರಸ್ವತಿ ಎಂದೂ ಕರೆಯುತ್ತಾರೆ. ಶಿವನು ತನ್ನ ಗಂಟಲಿನಲ್ಲಿ ವಿಷವನ್ನು ಧರಿಸಿ ನೀಲಕಂಠನಾದಂತೆಯೇ, ತಾರಾ ಕೂಡ ಬ್ರಹ್ಮಾಂಡವನ್ನು ರಕ್ಷಿಸಲು ಎಲ್ಲಾ ದುಷ್ಟತನವನ್ನು ತನ್ನೊಳಗೆ ಹೀರಿಕೊಳ್ಳುತ್ತಾಳೆ. ಆಭರಣಗಳು ಅಥವಾ ಅಲಂಕಾರಿಕ ಬಟ್ಟೆಗಳಿಲ್ಲದ ಅವಳ ಬೆತ್ತಲೆ ರೂಪವು ಲೌಕಿಕ ಆಸೆಗಳ ಮೇಲಿನ ನಿರಾಸಕ್ತಿಯಸ್ಸು ಸಂಕೇತಿಸುತ್ತದೆ. ಆಕೆಯ ಕುತ್ತಿಗೆಯಲ್ಲಿರುವ 51 ತಲೆಬುರುಡೆಗಳ ಮಾಲೆಯು 51 ಸಂಸ್ಕೃತ ಅಕ್ಷರಗಳನ್ನು ಪ್ರತಿನಿಧಿಸುತ್ತದೆ - ಇದು ಮಂತ್ರಗಳು ಮತ್ತು ಜ್ಞಾನದ ಮೇಲಿನ ಆಕೆಯ ಪ್ರಾಬಲ್ಯವನ್ನು ಸಂಕೇತಿಸುತ್ತದೆ. ಆಕೆಯ ನಾಲಿಗೆಯಿಂದ ತೊಟ್ಟಿಕ್ಕುವ ರಕ್ಕವು ತನ್ನ ಭಕ್ತರನ್ನು ರಕ್ಷಿಸುವ ಸಲುವಾಗಿ ಆಸುರೀ ಶಕ್ತಿಗಳನ್ನು ನಿರಂತರವಾಗಿ ನಾಶಮಾಡುವುದನ್ನು ತೋರಿಸುತ್ತದೆ.

ತಾರಾದೇವಿಯು ಉಗ್ರತೆ, ಮಾತೃ ವಾತ್ಸಲ್ಯ ಮತ್ತು ಅತ್ಯುನ್ನತ ಜ್ಞಾನದ ಪರಾಕಾಷ್ಠೆ.

ತಾರಾಳ ಪ್ರಮುಖ ದೇವಾಲಯಗಳಲ್ಲಿ ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿರುವ ತಾರಾ ಪೀಠ, ಒಡಿಶಾದ ರಾಯ್‌ಪುರದ ತಾರಾ-ತಾರಿಣಿ ದೇವಾಲಯ ಮತ್ತು ಗುವಾಹಟಿಯ ಉಗ್ರ ತಾರಾ ದೇವಾಲಯ ಸೇರಿವೆ.

ತಾರಾ ಶಕ್ತಿಯು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಸ್ಮಶಾನಗಳಲ್ಲಿ ಪ್ರಕಟವಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಅಘೋರಿಗಳು ಅಂತಹ ಸ್ಥಳಗಳಲ್ಲಿ ವಾಮಾಚಾರ ಪದ್ಧತಿಗಳ ಮೂಲಕ ರಾತ್ರಿಯಲ್ಲಿ ಅವಳನ್ನು ಪೂಜಿಸುತ್ತಾರೆ.

ಕನ್ನಡ

ಕನ್ನಡ

ಪುರಾಣಗಳು

Click on any topic to open

Copyright © 2025 | Vedadhara test | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...

We use cookies