ಕುರುಕ್ಷೇತ್ರವನ್ನು ಸಮಂತಪಂಚಕಂ ಎಂದು ಏಕೆ ಕರೆಯುತ್ತಾರೆ?

ಕುರುಕ್ಷೇತ್ರವನ್ನು ಸಮಂತಪಂಚಕಂ ಎಂದು ಏಕೆ ಕರೆಯುತ್ತಾರೆ?

ಸಮಂತಪಂಚಕಂ  ಎಂಬ ಹೆಸರು ಪರಶುರಾಮನಿಗೆ ಸಂಬಂಧಿಸಿದ ದಂತಕಥೆಯಿಂದ ಹುಟ್ಟಿಕೊಂಡಿದೆ. ತ್ರೇತಾಯುಗದ ಕೊನೆಯಲ್ಲಿ ಮತ್ತು ದ್ವಾಪರಯುಗದ ಆರಂಭದಲ್ಲಿ ಪರಶುರಾಮನು ಕ್ಷತ್ರಿಯ ಕುಲಗಳನ್ನು ಹಲವಾರು ಬಾರಿ ಸಂಹಾರ ಮಾಡಿದನು. ದಿಗ್ವಿಜಯ ದ್ಯೋತಕವಾದ ಕ್ರಿಯೆಯಾಗಿರದೆ,  ಕ್ಷತ್ರಿಯರಿಂದ ತನ್ನ ತಂದೆಯಾದ ಋಷಿ ಜಮದಗ್ನಿಯನ್ನು ಕೊಂದ ಸಿಟ್ಟಿಗೆ ಪ್ರತೀಕಾರವಾಗಿತ್ತು. ಕ್ಷತ್ರಿಯರು ಮಾಡಿದ ಪಾಪ  ಬ್ರಹ್ಮಹತ್ಯೆ (ಬ್ರಾಹ್ಮಣನನ್ನು ಕೊಲ್ಲುವುದು) ಈ ಶಿಕ್ಷೆಗೆ ಕಾರಣವಾಯಿತು.

ಈ ಯುದ್ಧಗಳ ಸರಣಿಯಲ್ಲಿ, ಕುರುಕ್ಷೇತ್ರದಲ್ಲಿ ಐದು ರಕ್ತದ ಕೊಳಗಳು ರೂಪುಗೊಂಡವು. ಪರಶುರಾಮನು ತನ್ನ ಪೂರ್ವಜರನ್ನು ತೃಪ್ತಿಪಡಿಸಲು ರಕ್ತದಿಂದ ತರ್ಪಣವನ್ನು (ಪೂರ್ವಜರಿಗೆ  ಅರ್ಪಣೆ) ಮಾಡಿದನು. ಈ ಐದು ಕೊಳಗಳು ಇರುವ ಪ್ರದೇಶಕ್ಕೆ ಸಮಂತಪಂಚಕಂ ಎಂಬ ಹೆಸರನ್ನು ಬಂದಿತು , ಇದರರ್ಥ 'ಐದು ಕೊಳಗಳ ನಾಡು.'

ಪರಶುರಾಮನು ತನ್ನ ಪಾಪ ವಿಮೋಚನೆಗಾಗಿ ತನ್ನ ಪೂರ್ವಜರನ್ನು ತೃಪ್ತಿಪಡಿಸಿದ ನಂತರ,  ತಾನು ಮಾಡಿದ ಹಿಂಸೆಗೆ ಪರಿಹಾರವನ್ನು ಹುಡುಕಿದನು. ಈ ಐದು ಕೊಳಗಳು ಪುಣ್ಯತೀರ್ಥಗಳಾಗಿ  ರೂಪಾಂತರಗೊಳ್ಳಲಿ ಎಂದು ಪಿತೃದೇವತೆಗಳನ್ನು ಪ್ರಾರ್ಥಿಸಿದನು. ಪಿತೃ ದೇವತೆಗಳು ಅವನನ್ನು ಆಶೀರ್ವದಿಸಿದರು, ಮತ್ತು ಕೊಳಗಳು ಪವಿತ್ರವಾದವು.

ಕುರುಕ್ಷೇತ್ರ: ಮಹಾಭಾರತ ಯುದ್ಧದ ಸ್ಥಳ

ದ್ವಾಪರ ಯುಗದಲ್ಲಿ ಮಹಾಭಾರತಕ್ಕೆ ಕುರುಕ್ಷೇತ್ರ ರಣರಂಗವಾಯಿತು. ಈ ಯುದ್ಧವು ಹದಿನೆಂಟು ಅಕ್ಷೌಹಿಣಿ ಸೈನ್ಯಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಪ್ರತಿಯೊಂದು ಅಕ್ಷೌಹಿಣಿಯು 

  • 1,09,350 ಕಾಲಾಳು ಸೈನಿಕರು
  • 65,610 ಕುದುರೆಗಳು
  • 21,870 ರಥಗಳು
  • 21,870 ಆನೆಗಳು  - ಇವುಗಳನ್ನು ಒಳಗೊಂಡಿವೆ.

ಸಮಂತಪಂಚಕಂ ಎಂಬ ಹೆಸರು ಈ ಯುದ್ಧದ ಸಮಯದಲ್ಲಿ ಸಂಭವಿಸಿದ ಅಪಾರ ವಿನಾಶವನ್ನು ಪ್ರತಿಬಿಂಬಿಸುತ್ತದೆ, ಸಮೇತಾನಾಂ ಅಂತಃ ಯಸ್ಮಿನ್ಸ ಸಮನ್ತಃ—ಎಲ್ಲರೂ ನಾಶವಾದ ಸ್ಥಳವಾಗಿದೆ.

 

ಕನ್ನಡ

ಕನ್ನಡ

ಇತಿಹಾಸಗಳು

Click on any topic to open

0

Copyright © 2026 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize

We use cookies