Makara Sankranti Special - Surya Homa for Wisdom - 14, January

Pray for wisdom by participating in this homa.

Click here to participate

ದೇವಿಯು ಕಾಳಿಯ ರೂಪವನ್ನು ತೊರೆದು ಗೌರಿಯಾಗುತ್ತಾಳೆ

ದೇವಿಯು ಕಾಳಿಯ ರೂಪವನ್ನು ತೊರೆದು ಗೌರಿಯಾಗುತ್ತಾಳೆ

ಶಿವ ಮತ್ತು ದೇವಿ ಪಾರ್ವತಿ ಒಂದು ಕಾಲದಲ್ಲಿ ಮಂದರ ಪರ್ವತದ ಮಂದರಾಚಲದಲ್ಲಿ ವಾಸಿಸುತ್ತಿದ್ದರು. ಸಾಮಾನ್ಯವಾಗಿ, ಕೈಲಾಸ ಶಿವನ ವಾಸಸ್ಥಾನವೆಂದು ನಮಗೆ ತಿಳಿದಿದೆ, ಆದರೆ ಸ್ವಲ್ಪ ದಿನಗಳು ಅವರು ಮಂದರ ಪಾರ್ವತದಲ್ಲಿ ಉಳಿಯಲು ನಿರ್ಧರಿಸಿದರು ಮಂದರ ಪರ್ವತ ಒಂದು ಸುಂದರವಾದ ಸ್ಥಳವಾಗಿತ್ತು, ಮತ್ತು ದೇವಿ ಪಾರ್ವತಿಯನ್ನು ಸಂತೋಷಪಡಿಸಲು ಶಿವನು ಅದನ್ನು ಆರಿಸಿಕೊಂಡನು.

ಈ ಸಮಯದಲ್ಲಿ, ಶುಂಭ ಮತ್ತು ನಿಶುಂಭ​ ಎಂಬ ಇಬ್ಬರು ರಾಕ್ಷಸರು ಬ್ರಹ್ಮದೇವನನ್ನು ಕುರಿತು ತೀವ್ರ ತಪಸ್ಸು ಮಾಡುತ್ತಿದ್ದರು.  ಬ್ರಹ್ಮನು ಸಂತುಷ್ಟನಾಗಿ ಪ್ರತ್ಯಕ್ಷನಾದಾಗ, 'ಯಾವುದೇ ಮನುಷ್ಯನು ನಮ್ಮನ್ನು ಕೊಲ್ಲಲು ಸಾಧ್ಯವಾಗಬಾರದು.' ಎಂಬ ವರವನ್ನು ಪಡೆದರು. ಅವರು ಅಮರತ್ವವನ್ನು ಕೇಳಲು ಸಾಧ್ಯವಾಗದಿದ್ದರೂ, ಜನಿಸಿದ ಎಲ್ಲರಿಗೂ ಸಾವು ಅನಿವಾರ್ಯವಾದ್ದರಿಂದ, ಅವರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಯಸಿದ್ದರು. ಆದ್ದರಿಂದ, ಅವರು ಒಂದು ಷರತ್ತನ್ನು ಇರಿಸಿದರು: 'ನಾವು ದೇವಿ ಪಾರ್ವತಿಯ ದೇಹದಿಂದ ಜನಿಸಿದ ಕನ್ಯೆಯಿಂದ ಮಾತ್ರ ಕೊಲ್ಲಲ್ಪಡಬಹುದು ಆದರೆ ಜೈವಿಕವಾಗಿ ಅಲ್ಲ, ಅವಳ ಗರ್ಭದಿಂದ ಅಲ್ಲ. ಅವಳು ಯಾವುದೇ ಮನುಷ್ಯನ ಸಂಪರ್ಕವಿಲ್ಲದೆ ಹುಟ್ಟಿದವಳಾಗಿರಬೇಕು, ಮತ್ತು ಅವಳು ನಮ್ಮನ್ನು ಕೊಲ್ಲುವ ಮೊದಲು ನಾವು ಅವಳತ್ತ ಆಕರ್ಷಿತರಾಗಬೇಕು. ' ಬ್ರಹ್ಮ ಅವರ ಆಶಯದಂತೆ ವರ ನೀಡಿದನು.

ಬ್ರಹ್ಮನ ವರದಿಂದ ಅಧಿಕಾರ ಪಡೆದ ಶುಂಬ ಮತ್ತು ನಿಶುಂಬ ಎಲ್ಲೆಡೆ ದೌರ್ಜನ್ಯವನ್ನು ಮಾಡಲು ಪ್ರಾರಂಭಿಸಿದರು. ಇದರಿಂದ ಗಾಬರಿಗೊಂಡ ಬ್ರಹ್ಮದೇವ ಶಿವನನ್ನು ಆಶ್ರಯಿಸಿದನು. ದೈವ ಲೀಲೆ  ಪ್ರಾರಂಭವಾಯಿತು, ಇದು ಬ್ರಹ್ಮನ ಕೋರಿಕೆಯನ್ನು ಪೂರೈಸಲು ಕಾರಣವಾಯಿತು.

ಒಂದು ದಿನ, ಶಿವ ಮತ್ತು ದೇವಿ ಪಾರ್ವತಿ ಏಕಾಂತದಲ್ಲಿದ್ದಾಗ, ಶಿವನು ಪಾರ್ವತಿಯನ್ನು ಅವಳ ಕಪ್ಪು ಮೈಬಣ್ಣದ ಬಗ್ಗೆ ಲೇವಡಿ ಮಾಡಿದನು. ಅವನು ನಕ್ಕನು ಮತ್ತು ಅವಳನ್ನು 'ಕಾಳಿ (ಕಪ್ಪು ದೇಹ) ಎಂದು ಕರೆದನು' ದೇವಿ ಪಾರ್ವತಿ ಮನನೊಂದಳು ಅವಳು ಪ್ರತಿಕ್ರಿಯಿಸುತ್ತಾ, 'ಗಂಡನ ಪ್ರೀತಿ ಯಾವುದೇ ಮಹಿಳೆಗೆ ದೊಡ್ಡ ಆಸ್ತಿ. ನನ್ನ ಕಪ್ಪು ಮೈಬಣ್ಣ ನಿಮಗೆ ಇಷ್ಟವಿಲ್ಲದಿದ್ದರೆ, ಈ ರೀತಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಒಂದೋ ನಾನು  ಗೌರ(ಶ್ವೇತ)ವರ್ಣದವಳಾಗಬೇಕು ಅಥವಾ ನಾನು ಬದುಕಬಾರದು. ' ಎಂದಳು.

 ಕೋಪಗೊಂಡ ದೇವಿ ಪಾರ್ವತಿಯನ್ನು ಶಿವನು  ಸಮಾಧಾನಪಡಿಸಲು ಪ್ರಯತ್ನಿಸಿದನು. 'ನಾನು ತಮಾಷೆ ಮಾಡುತ್ತಿದ್ದೆ' ಎಂದು  ಹೇಳಿದನು. 'ನಿನ್ನ ಮೇಲಿನ ನನ್ನ ಪ್ರೀತಿ ನಿನ್ನ ನೋಟವನ್ನು ಆಧರಿಸಿಲ್ಲ. ನೀನು ಪ್ರಪಂಚದ ತಾಯಿ, ಮತ್ತು ನಾನು ವಿಶ್ವದ ತಂದೆ. ನಮ್ಮ ಪ್ರೀತಿ ದೈಹಿಕ ಗುಣಲಕ್ಷಣಗಳನ್ನು ಮೀರಿದೆ. ಕಾಮ ದೇವನ ಹುಟ್ಟಿಗೂ ಮೊದಲೇ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಇದು ದೈಹಿಕ ಆಕರ್ಷಣೆಯ ಬಗ್ಗೆ ಅಲ್ಲ. '

ಆದರೆ, ದೇವಿ ಪಾರ್ವತಿಗೆ ಒಪ್ಪಿಗೆಯಾಗಲಿಲ್ಲ. ಅವಳು, 'ನಿಮ್ಮ ಮನಸ್ಸಿನಲ್ಲಿ ಈಗಾಗಲೇ ಆಲೋಚನೆ ಇಲ್ಲದಿದ್ದರೆ ನೀವು ನನ್ನ ಮೈಬಣ್ಣವನ್ನು ಉಲ್ಲೇಖಿಸುತ್ತಿರಲಿಲ್ಲ. ಅಂದರೆ ಅದು ಯಾವಾಗಲೂ ಇತ್ತು. ' 'ನಾನು ಈ ಸ್ಥಳವನ್ನು ಬಿಟ್ಟು ಬ್ರಹ್ಮನನ್ನು ಮೆಚ್ಚಿಸುವ ಮೂಲಕ ನನ್ನ ಮೈಬಣ್ಣವನ್ನು ಬದಲಾಯಿಸಲು ತಪಸ್ಸು ಮಾಡುತ್ತೇನೆ' ಎಂದು ಹೇಳಿದಳು.

ಶಿವ ಅವಳನ್ನು ಕೇಳಿದ, 'ನೀನು ಅದನ್ನು ಏಕೆ ಮಾಡಬೇಕಾಗಿದೆ? ನಾನು ನಿನ್ನ ಮೈಬಣ್ಣವನ್ನು ಬದಲಾಯಿಸಬಹುದು, ಅಥವಾ ನೀನು  ಬಯಸಿದರೆ  ಅದನ್ನು ನೀನೇ  ಸಾಧಿಸಬಹುದು. ' ಪಾರ್ವತಿ, 'ಇಲ್ಲ, ತಪಸ್ಸನ್ನು ಆಚರಿಸುವುದರ ಮೂಲಕ ನಾನು ಅದನ್ನು ಮಾಡುತ್ತೇನೆ .. ನನ್ನ ಹಿಂದಿನ ಜನ್ಮದಲ್ಲಿ, ತಪವನ್ನು ಆಚರಿಸುವುದರ ಮೂಲಕ ನಾನು ನಿಮ್ಮನ್ನು ನನ್ನ ಗಂಡನಾಗಿ ಪಡೆದುಕೊಂಡೆ, ಮತ್ತು ನಾನು ಈಗ ಅದೇ ರೀತಿ ಮಾಡುತ್ತೇನೆ.'

ದೃಢ ನಿಶ್ಚಯದಿಂದ, ದೇವಿ ಪಾರ್ವತಿ ಶಿವನನ್ನು ಸುತ್ತುವರೆದು  ನಮಸ್ಕರಿಸಿ  ಹಿಮಾಲಯಕ್ಕೆ ತನ್ನ ತಪಸ್ಸನ್ನು ಪ್ರಾರಂಭಿಸಲು ಹೊರಟಳು. ಅವಳ ತಪಸ್ಸಿನ ಸಮಯದಲ್ಲಿ, ಅವಳ ಮನಸ್ಸು ಶಿವನ ಮೇಲೆ ಕೇಂದ್ರೀಕರಿಸಿತು. ಅದು ಶಿವನೇ, ಬ್ರಹ್ಮನ ರೂಪದಲ್ಲಿ, ತನ್ನ ಆಸೆಯನ್ನು ಪೂರೈಸುತ್ತಾನೆ ಎಂದು ಅವಳು ತಿಳಿದಿದ್ದಳು.

ಈ ಮಧ್ಯೆ, ಶುಂಬ ಮತ್ತು ನಿಶುಂಬ ದೇವತೆಗಳನ್ನು ಸ್ವರ್ಗದಿಂದ ಹೊರಹಾಕಿದರು. ದೇವತೆಗಳು, ಬ್ರಹ್ಮನ ಜೊತೆಗೆ  ದೇವಿಯ ಸಹಾಯವನ್ನು ಕೋರಿ ಹಿಮಾಲಯಕ್ಕೆ ಬಂದರು. ಅವಳು ಅಂತಹ ತೀವ್ರವಾದ ತಪಸ್ಸನ್ನು ಏಕೆ ಮಾಡುತ್ತಿದ್ದಾಳೆ ಎಂದು ಬ್ರಹ್ಮ ಕೇಳಿದನು, ಅದಕ್ಕೆ ಅವಳು ತಾನು ಗೌರವರ್ಣದವಳಾಗಬೇಕೆಂದು ಉತ್ತರಿಸಿದಳು. 'ಅಂತಹ ಕ್ಷುಲ್ಲಕ ಕಾರಣಕ್ಕಾಗಿ ಇಂತಹ ತಪವನ್ನು ಆಚರಿಸಲು  ಸಾಧ್ಯವಿಲ್ಲ. ಅದರ ಹಿಂದೆ ಬೇರೆ ಏನಾದರೂ ಕಾರಣ ಇರಬೇಕು. ಎಂದುಕೊಂಡನು.

ಅವರು ಮಾತನಾಡುತ್ತಿದ್ದಾಗ, ಪಾರ್ವತಿಯ ದೇಹದಿಂದ ಕಪ್ಪು ಬಣ್ಣದ ದೇವತೆ ಹೊರಹೊಮ್ಮಿದಳು,  ಈ ದೇವತೆ ಶುಂಭ ಮತ್ತು ನಿಶುಂಭ​ರನ್ನು ಕೊಲ್ಲುವ ಉದ್ದೇಶದಿಂದಾದ ಅವತಾರವಾಗಿತ್ತು. ಅವಳು ಪಾರ್ವತಿಯ ಕೋಶ(ಪೊರೆ) ದಿಂದ ಹೊರಹೊಮ್ಮಿದ್ದರಿಂದ, ಅವಳನ್ನು ಕೌಶಿಕಿ ಎಂದು ಕರೆಯಲಾಯಿತು. ಅವಳ ಕಪ್ಪು ಚರ್ಮವನ್ನು ಹೊರ ಚೆಲ್ಲಿದ ನಂತರ, ಪಾರ್ವತಿ ಗೌರವರ್ಣದವಳಾದಳು,  ಆದ್ದರಿಂದ ಅವಳನ್ನು ಗೌರಿ ಎಂದು ಕರೆಯಲಾಗುತ್ತಿದೆ. ನಂತರ, ಅವಳು ಮತ್ತೆ ಕಪ್ಪಾಗುತ್ತಾಳೆ ಮತ್ತು ಕಾಳಿಕಾ ಎಂದು ಕರೆಯಲ್ಪಟ್ಟಳು.

ಈ ಸಮಯದಲ್ಲಿಯೇ ಚಂಡ ಮತ್ತು ಮುಂಡರೆಂಬ, ಶುಂಭ ಮತ್ತು ನಿಶುಂಭದ ಸಹಾಯಕರು ದೇವಿ ಕೌಶಿಕಿಯನ್ನು ನೋಡಿದರು.

ದೇವಿ ತನ್ನ ಶರೀರದಿಂದ ಗೌರಿ ದೇವಿಯನ್ನು ಪ್ರಕಟಿಸಲು ಕಪ್ಪು ವರ್ಣದಿಂದ (ಕಾಳಿ) ಗೌರವರ್ಣ (ಗೌರಿ) ಗೆ ತಿರುಗಿದಳು, ಇದರ ಉದ್ದೇಶವು ಶುಂಭ ಮತ್ತು ನಿಶುಂಭ​ರನ್ನು ಸೋಲಿಸುವುದು.

ಪಾಠಗಳು -

  1. ಸ್ವಾಭಿಮಾನವು ಅಗತ್ಯವಾಗಿದೆ: ಪಾರ್ವತಿ ತನ್ನ ಘನತೆಗಾಗಿ ಎದ್ದು ನಿಲ್ಲುತ್ತಾಳೆ, ಸಂಬಂಧಗಳಲ್ಲಿ ತನ್ನನ್ನು ತಾನು ಮೌಲ್ಯಮಾಪನ ಮಾಡುವ ಪ್ರಾಮುಖ್ಯತೆಯನ್ನು ತೋರಿಸುತ್ತಾಳೆ ಮತ್ತು ಅಗೌರವವನ್ನು ಒಪ್ಪಿಕೊಳ್ಳುವುದಿಲ್ಲ.
  2. ಪ್ರಯತ್ನದ ಮೂಲಕ ರೂಪಾಂತರ: ನಿಜವಾದ ರೂಪಾಂತರಕ್ಕೆ ಸಮರ್ಪಣೆ ಅಗತ್ಯವಿದೆ. ತಪಸ್ಸನ್ನು  ನಿರ್ವಹಿಸುವ ಪಾರ್ವತಿಯ ಒತ್ತಾಯವು ಅರ್ಥಪೂರ್ಣ ಬದಲಾವಣೆಗಳನ್ನು ಸಾಧಿಸುವಲ್ಲಿ ಪರಿಶ್ರಮ ಮತ್ತು ಸ್ವಯಂ-ಪ್ರಯತ್ನದ ಮೌಲ್ಯವನ್ನು ನಮಗೆ ಕಲಿಸುತ್ತದೆ.
  3. ವೈಯಕ್ತಿಕ ಕ್ರಿಯೆಗಳ ಹಿಂದಿನ  ಉದ್ದೇಶ: ವೈಯಕ್ತಿಕ ಕ್ರಿಯೆಗಳು ಸಹ ಹೆಚ್ಚಿನ  ಮಹತ್ವವನ್ನು ಹೊಂದಬಹುದು. ಪಾರ್ವತಿಯ ರೂಪಾಂತರವು ಕೌಶಿಕಿಯ ಜನ್ಮಕ್ಕೆ ಕಾರಣವಾಗುತ್ತದೆ, ಇದು ಕೆಟ್ಟದ್ದನ್ನು ಸೋಲಿಸುವ ಮೂಲಕ ಪ್ರಕೃತಿಯಲ್ಲಿ ಸಮತೋಲನವನ್ನು ಪುನಃಸ್ಥಾಪಿಸುತ್ತದೆ.
53.9K
8.1K

Comments

Security Code
25467
finger point down
ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ತೇಜಸ್

ಉತ್ತಮವಾದ ಜ್ಞಾನವನ್ನೂ ನೀಡುತ್ತದೆ -ಅಂಬಿಕಾ ಶರ್ಮಾ

ಧಾರ್ಮಿಕ ವಿಷಯಗಳ ಬಗ್ಗೆ ಉತ್ತಮ ಮಾಹಿತಿ -ಮಾಲತಿ

ಜೈ ಹಿಂದ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಹನುಮಾನ್ -User_sndthk

ಬಹಳ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು -ಸಿದ್ದು ಕುದರಿಮಠ. ಘಟಪ್ರಭಾ.

Read more comments

Knowledge Bank

ನಾರದ ಮುನಿ ತ್ರಿಲೋಕ ಸಂಚಾರಿ

ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂ‌ಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನು‌ಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.

ಭಗವದ್ಗೀತೆ -

ನಿಮ್ಮ ಕರ್ತವ್ಯವನ್ನು ಪೂರ್ಣ ಸಮರ್ಪಣೆಯೊಂದಿಗೆ ನಿರ್ವಹಿಸಿ, ಆದರೆ ಫಲಿತಾಂಶಗಳ ಬಗ್ಗೆ ಯೋಚಿಸದೆ.

Quiz

ಶಿವನ ಬಿಲ್ಲಿನ ಹೆಸರೇನು?
ಕನ್ನಡ

ಕನ್ನಡ

ಪುರಾಣಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...