Jaya Durga Homa for Success - 22, January

Pray for success by participating in this homa.

Click here to participate

ಗೊಂದಲದಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು

ಗೊಂದಲದಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು

ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಓದಿನ ಕಡೆಗೆ ಗಮನಕೊಡುವಂತೆ ಮಾಡುವುದು ಪೋಷಕರಿಗೆ ಕಠಿಣವಾದ ಕೆಲಸ. ಇದಕ್ಕೆ ಅನೇಕ ತಾಂತ್ರಿಕ, ಮಾಧ್ಯಮಿಕ ವ್ಯವಸ್ಥೆಗಳ ಕಾರಣವಿದೆ. ನಮ್ಮ ಧರ್ಮಗ್ರಂಥಗಳ ಸಹಾಯದಿಂದ ಈ ಸಮಸ್ಯೆಯಿಂದ ಹೊರಬರಲು ಸಾಧ್ಯ. 

ಏಕಾಗ್ರತೆ ಮತ್ತು ಗಮನಹರಿಸುವಿಕೆ

ಅರ್ಜುನನ ಕಥೆಯನ್ನು ಪರಿಗಣಿಸಿದಾಗ, ಗುರು ದ್ರೋಣಾಚಾರ್ಯರು ಪಕ್ಷಿಯ ಕಣ್ಷಿನ ಮೇಲೆ ಗುರಿ ಇಡಲು ಹೇಳಿದಾಗ, ಅರ್ಜುನ ಒಬ್ಬನೇ ಉಳಿದವರೆಲ್ಲಾ ವಿವರಗಳ ಹೊರತಾಗಿ ಕೇವಲ ಕಣ್ಣಿನ ಮೇಲೆ ಗುರಿ ಇಡಲು ಸಾಧ್ಯವಾಯಿತು. ಈ ಪಾಠವು ಒಂದೇ ಕಡೆಗೆ ಗಮನ ಹರಿಸುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಮಕ್ಕಳು ಒಂದೇ ವಿಷಯದ ಕುರಿತು ಗಮನ ಹರಿಸಲು ತಿಳಿಸಬೇಕು. ನೂರು ವಿಧದ ಕಾರ್ಯಗಳನ್ನು ಮಾಡುವ ಬದಲು ಒಂದೇ ವಿಷಯದ ಮೇಲೆ ಹೆಚ್ಚು ಗಮನ ಹರಿಸಲು ಹೇಳಬೇಕು. 

ಶಿಸ್ತು

ಏಕಲವ್ಯನ ಕಥೆಯಲ್ಲಿ, ಅಸ್ತ್ರ ವಿದ್ಯೆಯನ್ನು ಕಲಿಯಲು ಗುರು ದ್ರೋಣಾಚಾರ್ಯರಿಂದ ನಿರಾಕರಿಸಲ್ಪಟ್ಟರೂ, ಸ್ವತಃ ಶಿಸ್ತು ಮತ್ತು ಬದ್ಧತೆಯಿಂದ ಗುರುದೇವರ ಪ್ರತಿಮೆಯ ಮುಂದೆ ಕಲಿತು ಶಸ್ತ್ರವಿದ್ಯಾಪಾರಂಗತನಾದ. ಈ ಪಾಠವು ಶಿಸ್ತಿನ ಮಹತ್ವವನ್ನು ತಿಳಿಸುತ್ತದೆ. ಮಕ್ಕಳು ಶಿಸ್ತಿನ ಬಗ್ಗೆ ತಿಳಿಯಬೇಕು. ಅಧ್ಯಯನ ಅಥವಾ ಅಧ್ಯಯನೇತರ ವಿಷಯಗಳಲ್ಲಿ ಸಾಧನೆ ಮಾಡಲು ಒಂದು ಗುರಿ ಇಟ್ಟುಕೊಂಡು ಶ್ರಮಿಸಬೇಕು. 

ಸಾವಧಾನ ಚಿತ್ತ

ಶ್ರೀ ಕೃಷ್ಣನು ಅರ್ಜುನನಿಗೆ 'ನಿನ್ನ ಕರ್ತವ್ಯಗಳನ್ನು ಮಾತ್ರ ಮಾಡು, ಅದರ ಫಲವನ್ನು ನನಗೆ ಬಿಡು' ಎಂದು ಹೇಳಿದಾಗ, ಸಮಾಧಾನ ಚಿತ್ತ ಮತ್ತು ಪ್ರಸಕ್ತ ವಿಷಯದಲ್ಲಿ ವ್ಯವಹರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಮಕ್ಕಳಿಗೆ ಧ್ಯಾನ ಮತ್ತು ಪ್ರಾಣಾಯಾಮಗಳ ಮಹತ್ವವನ್ನು ತಿಳಿಸಬೇಕು. ವರ್ತಮಾನದಲ್ಲಿಯೇ ಇದ್ದು, ಸದ್ಯದ ಕಾರ್ಯಗಳ ಬಗ್ಗೆ ಗಮನ ಕೊಡಲು ಹೇಳಬೇಕು. 

ಕುತೂಹಲ ಮತ್ತು ಕಲಿಕೆ

ನಚಿಕೇತನ ಕಥೆಯಲ್ಲಿ, ಬಾಲಕ ನಚಿಕೇತನು ತನ್ನ ತಂದೆ ಮಾಡುತ್ತಿರುವ ಆಚರಣೆಗಳ ಬಗ್ಗೆ ವಿಚಾರಿಸುತ್ತಾನೆ ಮತ್ತು ಯಮಧರ್ಮನಿಂದ ಉಪನಿಷತ್ ಜ್ಞಾನವನ್ನು ಪಡೆಯುತ್ತಾನೆ. ಈ ಪಾಠವು ಜ್ಞಾನ ತಿಳಿಯಲು ಮತ್ತು ಕುತೂಹಲವನ್ನು ಬೆಳೆಸಲು ಮಕ್ಕಳಿಗೆ ಪಾಠ ನೀಡುತ್ತದೆ. ಮಕ್ಕಳಲ್ಲಿ ವಿಷಯಗಳ ಬಗ್ಗೆ ಕುತೂಹಲವನ್ನು ಹುಟ್ಟಿಸುವಂತೆ ಮಾಡಬೇಕು. ಪ್ರಶ್ನೆಗಳನ್ನು ಕೇಳುವ ಅಭ್ಯಾಸವನ್ನು ಪ್ರೇರೇಪಿಸಬೇಕು. 

ಸಂತುಲತೆ ಮತ್ತು ಸಮಾನತೆ

ಭಗವಾನ್ ಶ್ರೀ ರಾಮನು ಸಂತುಲಿತ ಬುದ್ಧಿಗೆ ಪ್ರಸಿದ್ಧ. ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸಿದ. ಈ ಪಾಠವು ಸಮತೋಲನ ಮತ್ತು ಸಮಾನತೆ ಕುರಿತಂತೆ ಮಕ್ಕಳಿಗೆ ಪಾಠ ನೀಡುತ್ತದೆ. ಮಕ್ಕಳಿಗೆ ಸಮತೋಲಿತ ಮನಸ್ಸಿನ ಮಹತ್ವವನ್ನು ತಿಳಿಸಬೇಕು. ಊಟ, ಆಟ, ಮತ್ತು ವಿಶ್ರಾಂತಿಯ ನಡುವೆ ಸಮಯದ ಪಾವತಿಯನ್ನು ಕಲಿಸಲು ತಿಳಿಸಬೇಕು. 

ಕೆಲವು ಅಂಶಗಳು

  1. ಯಾವುದೇ ಸಾಧನೆ ಮಾಡಬೇಕಾದರೆ, ಸಾಧಿಸಬೇಕಾದ ಗುರಿಯನ್ನು ಸ್ಪಷ್ಟಪಡಿಸಬೇಕು. 
  2. ಅರ್ಜುನನಂತೆ ಗುರಿಯನ್ನು ಮಾತ್ರವೇ ಮನಸ್ಸಿನಲ್ಲಿ ಇಟ್ಟು ಸಾಧಿಸಲು ಪ್ರೇರೇಪಿಸಬೇಕು. 
  3. ಏಕಲವ್ಯನಂತೆ ಸತತ ಪ್ರಯತ್ನ ಮಾಡಬೇಕು. 
  4. ಓದು, ನಿದ್ರೆ, ಮತ್ತು ಅಭ್ಯಾಸಗಳಿಗೆ ಸಂಯಮದಿಂದ ಪ್ರಯತ್ನಿಸಬೇಕು. ಚಿತ್ತ ಏಕಾಗ್ರತೆಗಾಗಿ ಕೃಷ್ಣನ ಬೋಧಿಸಿದ ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಮಾಡಬೇಕು. 
  5. ನಚಿಕೇತನಂತೆ ಮಕ್ಕಳಲ್ಲಿ ವಿಷಯಗಳ ಬಗ್ಗೆ ಆಸಕ್ತಿಯನ್ನು ಹುಟ್ಟಿಸಬೇಕು. ಕುತೂಹಲದಿಂದ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸಬೇಕು. 
  6. ಅವರ ಹಿತಾಸಕ್ತಿ ಗಳಿಗನುಗುಣವಾಗಿ ಅನ್ವೇಷಣೆಯ ಬುದ್ಧಿಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಬೇಕು. 
  7. ಏಕಾಗ್ರತೆಯಿಂದ ಅಧ್ಯಯನಕ್ಕೆ ಸಹಾಯ ಮಾಡಬೇಕು. 
  8. ನಿಗಧಿತ ಕಾಲಮಿತಿಯಲ್ಲಿ ಕೆಲಸ ಮಾಡುವ ಕಲೆಯನ್ನು ರೂಢಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. 
  9. ಸರಳ ತಂತ್ರಗಳನ್ನು ಬಳಸಿ ಸೃಜನಶೀಲ ಚಟುವಟಿಕೆ, ದೈಹಿಕ ವ್ಯಾಯಾಮ, ಆಟ, ಮತ್ತು ಸಮಾಧಾನ ಚಿತ್ತದೊಂದಿಗೆ ನಿಗಧಿತ ಸಮಯದಲ್ಲಿ ಕಾರ್ಯ ಮುಗಿಸುವ ಚಾಣಾಕ್ಷತೆ, ಇತ್ಯಾದಿಗಳನ್ನು ರಾಮನಂತೆ ಸಾವಧಾನ ಚಿತ್ತದಿಂದ ಮಾಡುತ್ತಾ ಗೆಲುವು ಸಾಧಿಸಲು ಪ್ರೇರೇಪಿಸಬೇಕು. 
  10. ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಧನಾತ್ಮಕವಾಗಿ ಹೊಗಳುವುದು ಮತ್ತು ಸಣ್ಣ ಉಡುಗೊರೆಗಳನ್ನು ನೀಡುವುದು ಮಕ್ಕಳಲ್ಲಿ ಒಳ್ಳೆಯ ನಡವಳಿಕೆಯನ್ನು ಬೆಳೆಸುತ್ತದೆ. 
  11. ಮಕ್ಕಳನ್ನು ದೂರದರ್ಶನ, ವಿಡಿಯೋ ಗೇಮ್ಗಳಿಂದ ದೂರವಿಡಬೇಕು. ಆಧ್ಯಾತ್ಮಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಬೇಕು, ಜಪ, ಶ್ಲೋಕ ಪಠನ, ಮತ್ತು ಮಂತ್ರ ಜಪ ಮಾಡುವುದರಿಂದ ಮಾನಸಿಕ ಸ್ಪಷ್ಟತೆ ಮತ್ತು ಅರಿವು ಮೂಡಿಸಲು ಪ್ರಯತ್ನಿಸಬೇಕು. 
  12. ದೊಡ್ಡವರು ಮಕ್ಕಳಿಗೆ ಆದರ್ಶ ವ್ಯಕ್ತಿಯಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕು.

 

೫ ನೇ ತರಗತಿಯ ಮಕ್ಕಳ ವೇಳಾಪಟ್ಟಿ

 

ಬೆಳಿಗ್ಗೆ 6:00 ರಿಂದ 6:15 ರವರೆಗೆ 

ಏಳುವುದು, ದಿನವನ್ನು ಧನಾತ್ಮಕವಾಗಿ ಆರಂಭಿಸುವುದು.

 

6:15 ರಿಂದ 6:30 ರವರೆಗೆ 

ವ್ಯಾಯಾಮ, ಯೋಗ, ಮತ್ತು ಸಣ್ಣ ಪ್ರಮಾಣದ ನಡಿಗೆ.

 

6:45 ರಿಂದ 7:00 ರವರೆಗೆ 

ಸ್ನಾನದ ಸಮಯ, ದೈಹಿಕ ಸ್ವಚ್ಛತೆಯೊಂದಿಗೆ ದಿನದ ಆರಂಭ.

 

7:00 ರಿಂದ 7:15 ರವರೆಗೆ 

ಪ್ರಾರ್ಥನೆ, ಶ್ಲೋಕ ಪಠನ. 

 

7:15 ರಿಂದ 7:30 ರವರೆಗೆ 

ಉಪಾಹಾರ, ಸಮತೋಲಿತ ಆಹಾರ, ಕುಟುಂಬದ ಸದಸ್ಯರ ಜೊತೆ ಸೇವನೆ. 

 

7:30 ರಿಂದ 7:45 ರವರೆಗೆ 

ಶಾಲಾ ಸಿದ್ಧತೆ, ದಿನದ ವೇಳಾಪಟ್ಟಿ ಪರಿಶೀಲನೆ ಮತ್ತು ತಯಾರಿ. 

 

8:00 ರಿಂದ 2:00 ರವರೆಗೆ 

ಶಾಲಾ ಸಮಯ, ಶಾಲೆಯಲ್ಲಿ ಕಲಿಕೆ. 

 

2:00 ರಿಂದ 3:00 ರವರೆಗೆ 

ಊಟ ಮತ್ತು ವಿಶ್ರಾಂತಿ. 

 

2:30 ರಿಂದ 3:00 ರವರೆಗೆ 

ಸಣ್ಣ ಪ್ರಮಾಣದ ಚಟುವಟಿಕೆ ಮತ್ತು ಆಟ. 

 

3:00 ರಿಂದ 4:00 ರವರೆಗೆ 

ಮನೆಗೆಲಸ ಮತ್ತು ಓದುವಿಕೆ. 

 

4:00 ರಿಂದ 4:30 ರವರೆಗೆ 

ಲಘು ಉಪಾಹಾರ ಮತ್ತು ಸಣ್ಣ ವಿರಾಮ. 

 

4:30 ರಿಂದ 6:00 ರವರೆಗೆ 

ಓದು. 

 

6:00 ರಿಂದ 6:30 ರವರೆಗೆ 

ದೂರದರ್ಶನ, ಪತ್ರಿಕೆ ಓದು, ಮತ್ತು ಮೊಬೈಲ್ ಫೋನ್ ಬಳಕೆ (ದೊಡ್ಡವರ ಮಾರ್ಗದರ್ಶನದಲ್ಲಿ). 

 

6:30 ರಿಂದ 7:00 ರವರೆಗೆ 

ಪಠ್ಯೇತರ ಚಟುವಟಿಕೆ, ಸಂಗೀತ, ಕ್ರೀಡೆ ಅಥವಾ ಆಸಕ್ತಿಯ ವಿಷಯದಲ್ಲಿ ತೊಡಗಿಸಿಕೊಳ್ಳುವಿಕೆ. 

 

7:00 ರಿಂದ 7:30 ರವರೆಗೆ 

ರಾತ್ರಿಯ ಊಟ, ಕುಟುಂಬದ ಸದಸ್ಯರೊಂದಿಗೆ ಮಾತುಕತೆ. 

 

7:30 ರಿಂದ 8:00 ರವರೆಗೆ 

ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವುದು. 

 

8.30 ರಿಂದ 9.00 ರವರೆಗೆ

ನಿದ್ದೆಗೆ ಮೊದಲು ಲಘು ಓದು

 

9.00 ರಿಂದ 9.30 ರವರೆಗೆ

ದಿನಾಂತ್ಯದಲ್ಲಿ ಅವಲೋಕನ ಹಾಗೂ ನಿದ್ದೆಯ ತಯಾರಿ. 

 

9.30 ಗಂಟೆಗೆ 

ನಿದ್ದೆ. ಪೂರ್ಣ ಪ್ರಮಾಣದ ನಿದ್ದೆಯು ಬೆಳವಣಿಗೆಗೆ ಸಹಕಾರಿ

ಈ ರೀತಿಯ ವೇಳಾಪಟ್ಟಿ ನಮ್ಮ ಪುರಾಣಗಳಲ್ಲಿ ಹೇಳಿದಂತಹ ಎಲ್ಲಾ ಪರಿಣಾಮಕಾರಿ ಅಂಶಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ, ಶಿಸ್ತು, ಸಂಯಮ, ನೀತಿ, ನಿಯಮ, ಇತ್ಯಾದಿಗಳನ್ನು ಸಾಧಿಸಲು ಸಹಾಯವಾಗುತ್ತದೆ. ಈ ವೇಳಾಪಟ್ಟಿಯನ್ನು ಅವರವರ ಅಗತ್ಯಗಳಿಗನುಗುಣವಾಗಿ ಪರಿವರ್ತಿಸಬಹುದು.

117.9K
17.7K

Comments

Security Code
92168
finger point down
ಇಂತಹ ಅದ್ಭುತ ವೆಬ್‌ಸೈಟ್ ಮೊದಲನೇ ಬಾರಿಗೆ ನೋಡಿದ್ದೇನೆ 😲 -ಭಾರದ್ವಾಜ್ ಶರ್ಮಾ

💐💐💐💐💐💐💐💐💐💐💐 -surya

ಜ್ಞಾನಸಂಪತ್ತಿನ ವರ 😊 -ಆರತಿ ಶೆಟ್ಟಿ

ವೇದಗಳು ಮತ್ತು ಪುರಾಣಗಳಲ್ಲಿ ಆಸಕ್ತರು ಇದಕ್ಕಾಗಿ ತುಂಬಾ ಒಳ್ಳೆಯ ವೆಬ್‌ಸೈಟ್ -ಜಯಕುಮಾರ್ ನಾಯಕ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

Read more comments

Knowledge Bank

ಹಾವುಗಳಿಗೆ ವಿಷ ಎಲ್ಲಿಂದ ಬಂತು?

ಶ್ರೀಮದ್ ಭಾಗವತದ ಪ್ರಕಾರ, ಭಗವಾನ್ ಶಿವನು ಸಮುದ್ರ ಮಥನದ ಸಮಯದಲ್ಲಿ ಹೊರಹೊಮ್ಮಿದ ಹಾಲಾಹಲದ ವಿಷವನ್ನು ಕುಡಿಯುತ್ತಿದ್ದಂತೆ, ಅವನ ಕೈಯಿಂದ ಸ್ವಲ್ಪ ವಿಷವು ಹೊರ ಚೆಲ್ಲಿತು. ಇದು ಹಾವುಗಳು ಮತ್ತು ಇತರ ಜೀವಿಗಳು ಮತ್ತು ವಿಷಕಾರಿ ಸಸ್ಯಗಳಲ್ಲಿನ ವಿಷವಾಯಿತು.

ಲೌಕಿಕ ಆಸೆಗಳನ್ನು ತಪ್ಪಿಸುವುದು ಹೇಗೆ?

ನಾರದ-ಭಕ್ತಿ-ಸೂತ್ರದ ಪ್ರಕಾರ. 7-8, ಲೌಕಿಕ ಚಟುವಟಿಕೆಗಳನ್ನು ತಪ್ಪಿಸುವ ಮೂಲಕ ಮತ್ತು ಕೇವಲ ಭಗವಂತನಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವ ಮೂಲಕ ನೀವು ಲೌಕಿಕ ಬಯಕೆಗಳನ್ನು ತೊಡೆದುಹಾಕಬಹುದು.

Quiz

ವಾಲ್ಮೀಕಿ ರಾಮಾಯಣದ ಯಾವ ಕಾಂಡದಲ್ಲಿ ರಾಮಸೇತುವಿನ ನಿರ್ಮಾಣ ನಡೆಯುತ್ತದೆ?
ಕನ್ನಡ

ಕನ್ನಡ

ಮಕ್ಕಳಿಗಾಗಿ

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...