ಭಗವಂತ ಗಣೇಶರನ್ನು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ದೇವರು ಎಂದು ಪರಿಗಣಿಸಲಾಗುತ್ತದೆ. ಅವರ ರೂಪವು ಅದ್ಭುತವಾಗಿದೆ. ಆನೆ ತಲೆ, ಸಣ್ಣ ಕಣ್ಣುಗಳು, ಸೊ೦ಡಿಲು, ಮತ್ತು ದೊಡ್ಡ ಕಿವಿಗಳು ಇರುವುದರಿಂದ ಅವರನ್ನು ಗಜಾನನ ಎಂದು ಕರೆಯಲಾಗುತ್ತದೆ.
ಆನೆಯು ಸಸ್ಯಾಹಾರಿ ಮತ್ತು ಗಣೇಶರೂ ಹೌದು. ಆನೆಯನ್ನು ಬುದ್ಧಿವಂತ ಪ್ರಾಣಿ ಎನ್ನಲಾಗುತ್ತದೆ, ಆದ್ದರಿಂದ ಇದು, ಗಣೇಶರ ಗುಣಲಕ್ಷಣಗಳೊಂದಿಗೆ ಹೊಂದಿಕೆಯಾಗುತ್ತದೆ. ಅವರ ವಿಶಾಲ ತಲೆ ಗಣೇಶರ ಬುದ್ಧಿವಂತಿಕೆಯ ಸಂಕೇತವಾಗಿದೆ.
ಆನೆಗಳಂತಹ ದೊಡ್ಡ ಕಿವಿಗಳು, ಗಣೇಶರು ಕ್ಷೀಣವಾದ ಕರೆ ಮತ್ತು ಸಣ್ಣ ಧ್ವನಿಯನ್ನು ಸಹ ಕೇಳುವ ಮತ್ತು ಅರ್ಥಮಾಡಿಕೊಳ್ಳುವ ಶಕ್ತಿಯಿರುವುದನ್ನು ತೋರಿಸುತ್ತದೆ. ಆನೆಗಳ ಕಣ್ಣುಗಳು ದೂರದವರೆಗೆ ನೋಡಬಹುದು, ಆದ್ದರಿಂದ ಗಣೇಶರೂ ದೂರದರ್ಶಿಗಳು. ಆನೆಯ ಸೊಂಡಿಲು ದೊಡ್ಡ ವಸ್ತುಗಳನ್ನು ಸುಲಭವಾಗಿ ಬೇರು ಸಹಿತ ಕಿತ್ತುಹಾಕುವ ಮತ್ತು ಸೂಕ್ಷ್ಮವಾಗಿರುವ ಸೂಜಿಯನ್ನು ಎತ್ತಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ವಿಶಿಷ್ಟವಾಗಿ, ಒಬ್ಬ ಬಲಿಷ್ಠ ಕುಸ್ತಿಪಟು ಸಣ್ಣ ವಸ್ತುಗಳನ್ನು ನಿಭಾಯಿಸುವ ಕೌಶಲ್ಯವನ್ನು ಹೊಂದಿರುವುದಿಲ್ಲ, ಆದರೆ ಗಣೇಶರು ಸಂಕೀರ್ಣವಾದ ಮತ್ತು ದೊಡ್ಡ ಕಾರ್ಯಗಳನ್ನು ಸಮಾನ ಕೌಶಲ್ಯದಿಂದ ನಿರ್ವಹಿಸಬಲ್ಲರು. ಅವರ ಸೊ೦ಡಿಲು, ಉದ್ದನೆಯ ಮೂಗು, ಬುದ್ಧಿಶಕ್ತಿಯನ್ನು ಸಂಕೇತಿಸುತ್ತದೆ ಮತ್ತು 'ನಾದ ಬ್ರಹ್ಮ' ವನ್ನು ಪ್ರತಿನಿಧಿಸುತ್ತದೆ.
ಗಣೇಶರ ನಾಲ್ಕು ಭುಜಗಳು ನಾಲ್ಕು ದಿಕ್ಕುಗಳವರೆಗೆ ಅವರ ತಲುಪುವಿಕೆಯ ಸಂಕೇತವಾಗಿದೆ. ಅವರ ದೇಹದ ಬಲ ಭಾಗ ಬುದ್ಧಿ ಮತ್ತು ಅಹಂಕಾರವನ್ನು ಸಂಕೇತಿಸುತ್ತದೆ, ಎಡಭಾಗವು ಹೃದಯ ಮತ್ತು ಕರುಣೆಯ ಸಂಕೇತವಾಗಿದೆ.
ಅವರ ಬಲ ಮೇಲಿನ ಕೈಯಲ್ಲಿ ಅಂಕುಶವು ಜಗತ್ತಿನ ಅಡೆತಡೆಗಳನ್ನು ನಿವಾರಣೆಯ ಸಂಕೇತವಾಗಿದೆ, ಮತ್ತು ಇನ್ನೊಂದು ಕೈ ಆಶೀರ್ವಾದ ನೀಡುತ್ತದೆ. ಎಡ ಒಂದರ ಕೈಯಲ್ಲಿ ಹಗ್ಗ ಪ್ರೀತಿಯ ಸಂಕೇತವಾಗಿದೆ, ಅದು ಭಕ್ತರಿಗೆ ಸಿದ್ಧಿಯ ಸೌಭಾಗ್ಯವನ್ನು ನೀಡುತ್ತದೆ. ಅವರ ಇನ್ನೊಂದು ಎಡ ಕೈಯಲ್ಲಿ ಆನಂದದ ಸಂಕೇತವಾದ ಮೋದಕವಿದೆ. ಹಗ್ಗವನ್ನು ಬಯಕೆ ಮತ್ತು ಅಂಕುಶವನ್ನು ಜ್ಞಾನ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಅವರ ದೊಡ್ಡ ಹೊಟ್ಟೆ ಎಲ್ಲರ ರಹಸ್ಯಗಳನ್ನು ಜೀರ್ಣಿಸಿಕೊಳ್ಳುವುದನ್ನು ಸೂಚಿಸುತ್ತದೆ, ಮತ್ತು ಅವರು ಎಲ್ಲಿಯೂ ದಾರಿ ತಪ್ಪುವುದಿಲ್ಲ.
ಅವರಿಗೆ ಒಂದೇ ಒಂದು ಕೋರೆಹಲ್ಲು ಇದೆ, ಇದು ಆನೆಗಳ ದಂತ/ ಹಲ್ಲಿನಂತಿದೆ ಮತ್ತು ಎಲ್ಲಾ ಅಡೆತಡೆಗಳನ್ನು ನಿವಾರಿಸವ ಶಕ್ತಿಯಿದೆ.
ಕೇವಲ ಒಂದು ಕೋರೆಹಲ್ಲನ್ನು ಹೊಂದಿರುವ ಕಾರಣವನ್ನು ಈ ಕೆಳಗಿನಂತೆ ಪ್ರಸಿದ್ಧವಾಗಿ ಹೇಳಲಾಗುತ್ತದೆ: ಒಮ್ಮೆ, ಶಿವ ಮತ್ತು ಪಾರ್ವತಿ ಗುಹೆಯಲ್ಲಿ ನಿದ್ರಿಸುತ್ತಿದ್ದರು ಮತ್ತು ಗಣೇಶರು ಬಾಗಿಲಿನ ರಕ್ಷಕರಾಗಿದ್ದರು. ಆಗ ಪರುಶುರಾಮರು ಶಿವನನ್ನು ಭೇಟಿಯಾಗಲು ಬಂದರು, ಮತ್ತು ಗಣೇಶರು ಅವರನ್ನು ಪ್ರವೇಶಿಸಲು ನಿರಾಕರಿಸಿದಾಗ, ಪರುಶುರಾಮರು ಅವರನ್ನು ಹೊಡೆದರು, ಆಗ ಅವರ ಒಂದು ದಂತ ಮುರಿಯಿತು. ಆದರೆ ಗಣೇಶರು ಪ್ರತಿಕಾರ ಮಾಡಲಿಲ್ಲ, ಏಕೆಂದರೆ ಹೊಡೆದವರು ಹಿರಿಯ ಬ್ರಾಹ್ಮಣರು. ಇದು ಗಣೇಶರ ಸಿದ್ಧಾಂತ ಮತ್ತು ಕರ್ತವ್ಯವನ್ನು ಅನುಸರಿಸಲು ಎಲ್ಲಾ ದುಃಖವನ್ನು ಸಹಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರ ಶ್ವೇತವರ್ಣವು ಸಾತ್ವಿಕತೆಗೆ ಸಂಕೇತವಾಗಿದೆ.
Astrology
Atharva Sheersha
Bhagavad Gita
Bhagavatam
Bharat Matha
Devi
Devi Mahatmyam
Ganapathy
Glory of Venkatesha
Hanuman
Kathopanishad
Mahabharatam
Mantra Shastra
Mystique
Practical Wisdom
Purana Stories
Radhe Radhe
Ramayana
Rare Topics
Rituals
Rudram Explained
Sages and Saints
Shiva
Spiritual books
Sri Suktam
Story of Sri Yantra
Temples
Vedas
Vishnu Sahasranama
Yoga Vasishta