ಸೂಜುಗದ ಸೂಜು ಮಲ್ಲಿಗೆ

 

 

ಮಾದೇವ ಮಾದೇವ
ಮಾದೇವ ಮಾದೇವ
ಮಾ_ದೇ_ವ ಮಾದೇವ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಉಚ್ಛೆಳ್ಳು ಹೂವಂಗೆ ಹೆಚ್ಚ್ಯವೋ ನಿನ್ನ ಪರುಸೆ
ಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಏಳುಮಲೈಯ
ಹೆಚ್ಚೇವು ಕೌದಳ್ಳಿ ಕಣಿವೆಲಿ ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ, ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ಆ ಆ ಆ…
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಾದೇವ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ, ಮಾದೇವ

101.5K

Comments

ja77G
Song download -Prashanth
Sorry, please listen online Replied by Vedadhara

ಈ ಹಾಡು ಕೇಳುತ್ತಿದ್ದಾರೆ ದೇವರಿಗೆ ಹತ್ತಿರ ಅಂದಂತೆ ಆಗುತ್ತಿದೆ ಈ ಹಾಡು ರಚಿಸಿ ಸಂಯೋಜನೆಯಲ್ಲಿ ಮಾಡಿ ಮ ಹಾಡಿ ದವರಿಗೆ ಚೆನ್ನಾಗಿತ್ತು ಡ್ಯಾನ್ಸ್ ❤️ -Somanna

ಹಾಡು ಸೋಗಸಾಗಿದೆಕೇಳಬೇಕೆಂದನಿಸುತ್ನದೆ 💯❤️ -Manjula

What a voice amazing 🌹🌹🌹🌹🌹🌹🌹🌹🌹🌹 -Mallesh

Maddappa Elaranu Kapadu Tande 🙏 -M Goravar

Read more comments

ಮೃತ್ಯುವಿನ ಸೃಷ್ಟಿ

ಸೃಷ್ಟಿಯ ಸಮಯದಲ್ಲಿ, ಬ್ರಹ್ಮನು ಲೋಕವು ಶೀಘ್ರದಲ್ಲೇ ಜೀವಿಗಳಿಂದ ತುಂಬಿಹೋಗುವುದು ಕಲ್ಪಿಸಿರಲಿಲ್ಲ. ಬ್ರಹ್ಮನು ಲೋಕದ ಸ್ಥಿತಿಯನ್ನು ನೋಡಿ ಚಿಂತಿತನಾದನು ಮತ್ತು ಎಲ್ಲವನ್ನು ದಹಿಸಲು ಅಗ್ನಿಯನ್ನು ಕಳುಹಿಸಿದನು. ಭಗವಾನ್ ಶಿವನು ಮಧ್ಯಸ್ಥಿಕೆ ನೀಡಿ ಜನಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತವಾದ ಮಾರ್ಗವನ್ನು ಶಿಪಾರಸ್ಸು ಮಾಡಿದನು. ಆಗ ಬ್ರಹ್ಮನು ಆ ವಿಧಾನವನ್ನು ಕಾರ್ಯಗತಗೊಳಿಸಲು ಮರಣ ಮತ್ತು ಮೃತ್ಯುದೇವನನ್ನು ಸೃಷ್ಟಿಸಿದನು.

ಋಷಿ ಮತ್ತು ಮುನಿಗಳ ನಡುವೆ ವ್ಯತ್ಯಾಸವೇನು?

ಯಾರಿಗೆ ಯಾವುದಾದರೊಂದು ಶಾಶ್ವತ ಜ್ಞಾನವನ್ನು ಪ್ರಕಟಪಡಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯಲಾಗುತ್ತದೆ. ಅವರ ಮೂಲಕ, ಈ ಜ್ಞಾನವು ಮಂತ್ರವಾಗಿ ಪ್ರಕಟವಾಗುತ್ತದೆ. ಯಾರು ಜ್ಞಾನಿಗಳಾಗಿ, ಪಂಡಿತರಾಗಿ, ಬುದ್ಧಿವಂತರಾಗಿ ಮತ್ತು ಆಳವಾದ ಅವಲೋಕನವನ್ನು ಮಾಡುವ ಶಕ್ತಿಯನ್ನು ಹೊಂದಿರುತ್ತಾರೋ ಅವರನ್ನು ಮುನಿಗಳೆಂದು ಕರೆಯಲಾಗುತ್ತದೆ. ಮುನಿಗಳು ತಮ್ಮ ಹೇಳಿಕೆ ಬಗ್ಗೆ ಕೂಡ ನಿಯಂತ್ರಣವನ್ನು ಹೊಂದಿರುತ್ತಾರೆ.

Quiz

ಮಹಾಭಾರತವನ್ನು ಮೂಲತಃ ಏನೆಂದು ಕರೆಯಲಾಗುತ್ತಿತ್ತು?
Copyright © 2024 | Vedadhara | All Rights Reserved. | Designed & Developed by Claps and Whistles
| | | | |