ಇದು ಪುಟ್ಟ ಕೃಷ್ಣ ಒಬ್ಬ ದೊಡ್ಡ ದುಷ್ಟ ರಾಕ್ಷಸ ಅಘಾಸುರನನ್ನು ಹೇಗೆ ಕೊಂದ ಎನ್ನುವ ಕಥೆ.
ಅಘಾಸುರ ಕಂಸನ ಸೇನಾಪತಿಯಾಗಿದ್ದ. ಸಂಸ್ಕೃತದಲ್ಲಿ ಅಘ ಎಂದರೆ ಪಾಪಿ ಎಂದರ್ಥ.
Click below to listen to ಜಯ ಜನಾರ್ಧನ | JAYA JANARDHANA
ಕಂಸನು ಭಗವಾನ್ ಕೃಷ್ಣನ ತಾಯಿಯ ಸಹೋದರ. ಅವನು ತುಂಬಾ ಕ್ರೂರಿ ಮತ್ತು ದುಷ್ಟನಾಗಿದ್ದ. ಅವನು ತನ್ನ ಸ್ವಂತ ತಂದೆಯನ್ನು ಕಾರಾಗೃಹಕ್ಕೆ ತಳ್ಳಿ ಮಥುರಾದ ರಾಜನಾಗಿದ್ದ.
ಕೃಷ್ಣನ ಮಾತಾಪಿತರ ವಿವಾಹದ ಸಮಯದಲ್ಲಿ, ಅವರ ಎಂಟನೆ ಮಗ ಕಂಸನನ್ನು ಕೊಲ್ಲುತ್ತಾನೆ ಎಂದು ದಿವ್ಯನುಡಿಯೊಂದು ಕೇಳಿಸಿತು. ಕಂಸನು ಅವರನ್ನು ಕಾರಾಗೃಹದಲ್ಲಿ ಹಾಕಿದ ಮತ್ತು ಪ್ರತಿಯೊಂದು ಮಗುವು ಹುಟ್ಟಿದ ಕೂಡಲೇ ಅದನ್ನು ಸಾಯಿಸುತ್ತಿದ್ದ.
ಕೃಷ್ಣನು ದೇವರು. ಅವನು ಜನ್ಮತಳೆದಾಗ, ತನ್ನ ತಂದೆ ವಾಸುದೇವನಿಗೆ ತನ್ನನ್ನು ಕಾರಾಗೃಹದಿಂದ ಹೊರಗೆ ಕರೆದುಕೊಂಡು ಹೋಗಬೇಕೆಂದು ಪ್ರೇರೇಪಿಸಿದ. ಭಗವಂತನನ್ನು ಗೋಕುಲಕ್ಕೆ ಕರೆದೊಯ್ಯಲಾಯಿತು ಮತ್ತು ವಾಸುದೇವನ ದಾಯಾದಿಯಾದ ನಂದನ ಮನೆಯಲ್ಲಿ ಬಿಡಲಾಯಿತು. ಅದೇ ಸಮಯದಲ್ಲಿ ನಂದ ಮತ್ತು ಯಶೋದಾ ದಂಪತಿಗಳಿಗೆ ಒಂದು ಹೆಣ್ಣುಮಗು ಕೂಡ ಜನ್ಮತಾಳಿತು. ಆ ಹೆಣ್ಣು ಮಗುವನ್ನು ಕಾರಾಗೃಹಕ್ಕೆ ಕರೆತರಲಾಯಿತು.
ಅದು ಹೆಣ್ಣುಮಗುವಾದರೂ ಕಂಸನು ಅವಳನ್ನು ಕೊಲ್ಲಲು ಪ್ರಯತ್ನಿಸಿದ. ಆದರೆ ಅವಳು ದೇವಿಯ ಅವತಾರವಾಗಿದ್ದಳು. ಅವಳು ಕಂಸನ ಕೈಯಿಂದ ಜಾರಿ ತಪ್ಪಿಸಿಕೊಂಡು ಮಾಯವಾದಳು. ಅವಳನ್ನು ದೇವಿ ವಿಂಧ್ಯವಾಸಿನಿ ಎಂದು ಪೂಜಿಸಲಾಗುತ್ತದೆ.
ಕಂಸನು ಹಲವಾರು ರಾಕ್ಷಸರನ್ನು ಕೃಷ್ಣನನ್ನು ಕೊಲ್ಲಲು ಗೋಕುಲಕ್ಕೆ ಕಳುಹಿಸಿದ. ಅಘಾಸುರ ಕೂಡ ಅವರಲ್ಲಿ ಒಬ್ಬನಾಗಿದ್ದ.
ಅಘಾಸುರನಿಗೆ ಮಂತ್ರಶಕ್ತಿಯು ಗೊತ್ತಿತ್ತು. ಅವನು ಆಕಾಶ ಮಾರ್ಗವಾಗಿ ಹಾರುತ್ತಾ ಬಂದ ಮತ್ತು ಕಾಲಿಂದಿ ನದಿಯ ದಡದಲ್ಲಿ ಕೃಷ್ಣ ತನ್ನ ಸ್ನೇಹಿತರೊಂದಿಗೆ ಆಡುತ್ತಾ ಇರುವುದನ್ನು ನೋಡಿದ. ಅವನು ಒಂದು ದೊಡ್ಡ ಸರ್ಪವಾದ ಮತ್ತು ಭೂಮಿಯ ಮೇಲೆ ತನ್ನ ಬಾಯನ್ನು ಅಗಲವಾಗಿ ತೆರೆದುಕೊಂಡು ಮಲಗಿದ. ಹುಡುಗರು ಅದೊಂದು ಗುಹೆಯೆಂದು ಭಾವಿಸಿ ಆಕಸ್ಮಿಕವಾಗಿ ಒಳಗೆ ಹೋದರು. ಕೃಷ್ಣ ಮತ್ತು ಬೇರೆ ಎಲ್ಲಾ ಹುಡುಗರು ಒಳಗಿರುವಾಗ, ಅಘಾಸುರನು ತನ್ನ ಬಾಯಿಯನ್ನು ಮುಚ್ಚಿ ಅವರನ್ನು ಹಿಂಡಲು ಪ್ರಾರಂಭಿಸಿದ. ಕೆಲವು ಹುಡುಗರು ಸತ್ತು ಹೋದರು.
ಭಗವಾನ್ ಕೃಷ್ಣ ತನಗೆತಾನೇ ಬೆಳೆಯಲು ಪ್ರಾರಂಭಿಸಿದ. ಅವನು ಎಷ್ಟು ಬೃಹತ್ತಾಗಿ ಬೆಳೆದನೆಂದರೆ ಅಘಾಸುರನ ದೇಹವು ಸಿಡಿದು ತೆರೆದುಕೊಂಡಿತು. ಅಘಾಸುರನು ಸತ್ತುಹೋದ. ಕೃಷ್ಣ ತನ್ನ ದೈವಿಶಕ್ತಿಯಿಂದ ಆ ಸತ್ತುಹೋಗಿದ್ದ ಹುಡುಗರನ್ನು ಬದುಕಿಸಿದ. ಇತರರು ಸುರಕ್ಷಿತವಾಗಿ ಹೊರಬಂದರು.
ಕಂಸನ ಕೆಟ್ಟ ಯೋಜನೆಯು ಹಾಳಾಯಿತು.
ಹನುಮಾನ್ ಚಾಲೀಸಾವು ಹನುಮಂತನ ಸದ್ಗುಣಗಳು ಮತ್ತು ಕಾರ್ಯಗಳನ್ನು ವೈಭವೀಕರಿಸುವ ಗೋಸ್ವಾಮಿ ತುಳಸೀದಾಸರು ರಚಿಸಿದ ಭಕ್ತಿಗೀತೆಯಾಗಿದೆ. ರಕ್ಷಣೆ, ಧೈರ್ಯ ಮತ್ತು ಆಶೀರ್ವಾದದ ಅಗತ್ಯವಿರುವ ಸಮಯದಲ್ಲಿ ಅಥವಾ ದೈನಂದಿನ ದಿನಚರಿಯ ಭಾಗವಾಗಿ ನೀವು ಅದನ್ನು ಪಠಿಸಬಹುದು
ಮಹಾಭಾರತ 3.191 ರ ಪ್ರಕಾರ, ಒಬ್ಬ ವ್ಯಕ್ತಿಯು ಸ್ವರ್ಗಲೋಕದಲ್ಲಿ ಎಷ್ಟು ಸಮಯ ಇರಬೇಕೆಂಬುದು ಆ ವ್ಯಕ್ತಿಯು ಭೂಮಿಯ ಮೇಲೆ ಮಾಡಿರುವ ಸತ್ಕರ್ಮಗಳ ಪ್ರಮಾಣದ ಮೇಲೆ ಆಧಾರವಾಗಿರುತ್ತದೆ. ಯಾವಾಗ ಭೂಮಿಯ ಮೇಲಿನ ಜನರು ಆ ವ್ಯಕ್ತಿಯು ಮಾಡಿರುವ ಸತ್ಕರ್ಮಗಳನ್ನು ನೆನೆಯುವುದಿಲ್ಲವೋ ಆಗ ಅವನನ್ನು ಸ್ವರ್ಗಲೋಕದಿಂದ ಹೊರಗೆ ಕಳುಹಿಸಲಾಗುತ್ತದೆ.
ಭೂಮಿ ಮತ್ತು ಆಸ್ತಿಯನ್ನು ಪಡೆಯಲು ಭೂ ಸೂಕ್ತಮ್
ಓಂ ಭೂಮಿರ್ಭೂಮ್ನಾ ದ್ಯೌರ್ವರಿಣಾಽನ್ತರಿಕ್ಷಂ ಮಹಿತ್ವಾ . ಉಪಸ್ಥೇ....
Click here to know more..ಅಧ್ಯಯನದಲ್ಲಿ ಯಶಸ್ಸಿಗೆ ಕೃಷ್ಣ ಮಂತ್ರ
ಕೃಷ್ಣ ಕೃಷ್ಣ ಮಹಾಕೃಷ್ಣ ಸರ್ವಜ್ಞ ತ್ವಂ ಪ್ರಸೀದ ಮೇ . ರಮಾರಮಣ ವಿಶ....
Click here to know more..ಶಾರದಾ ಸ್ತೋತ್ರ
ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ. ತ್ವಾಮಹಂ ಪ್ರಾರ್ಥಯೇ ....
Click here to know more..ಅನುವಾದ: ಡಿ.ಎಸ್.ನರೇಂದ್ರ
Please wait while the audio list loads..
Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints