ಭಗವಾನ್ ಶಿವನ ಪೂಜೆಯಲ್ಲಿ ಬಿಲ್ವಪತ್ರೆಯ ಪ್ರಾಮುಖ್ಯತೆಯು ಸಾಮಾನ್ಯವಾಗಿ ತಿಳಿದಿರುವ ವಿಚಾರ. ಈ ಲೇಖನದಲ್ಲಿ, ನಾವು ಬಿಲ್ವದ ದೈವಿಕ ವಿಷಯಗಳನ್ನು ನೋಡೋಣ.
ಏಗಲ್ ಮಾರ್ಮೆಲೋಸ್ (Aegle marmelos)
Click below to listen to Bilvashtakam
ಕೃಷ್ಣ ಯಜುರ್ವೇದದ ಪ್ರಕಾರ ಒಂದು ಕಾಲದಲ್ಲಿ ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದ. ದೇವತೆಗಳು ಯಾಗವನ್ನು ಮಾಡಿದರು, ಸೂರ್ಯದೇವನನ್ನು ಪ್ರಸನ್ನಗೊಳಿಸಿದರು ಮತ್ತು ಅವನು ಮತ್ತೆ ಪ್ರಕಾಶಿಸಲು ಆರಂಭಿಸಿದ. ಬಿಲ್ವ ಮರವು ಈ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಿತು. ಒಂದು ವೇಳೆ ಯಜ್ಞದಲ್ಲಿ ಬಿಲ್ವಮರವನ್ನು ಬಲಿಸ್ತಂಭವನ್ನಾಗಿ ಉಪಯೋಗಿಸಿದರೆ, ಯಜಮಾನನ ಪ್ರಭೆಯು ಹೆಚ್ಚುತ್ತದೆ.
ಶತಪಥ ಬ್ರಾಹ್ಮಣನ ಪ್ರಕಾರ ಬಿಲ್ವವು ಪ್ರಜಾಪತಿಯ ಮಜ್ಜೆ ಅಥವಾ ಎಲುಬಿನ ಕೊಬ್ಬಿನಿಂದ ಅಸ್ತಿತ್ವಕ್ಕೆ ಬಂದಿತು.
ವೇದಗಳು ಬ್ರಹ್ಮವರ್ಚಸ್ಸನ್ನು ಪಡೆಯುವುದಕ್ಕೆ ಬಿಲ್ವದ ಬಗ್ಗೆ ಹೇಳುತ್ತದೆ. ಬಿಲ್ವವನ್ನು ಯಾಗದಲ್ಲಿ ಉಪಯೋಗಿಸುವುದರಿಂದ ಆಹಾರ, ಶಕ್ತಿ ಮತ್ತು ಸಂತತಿಯ ಸಮೃದ್ಧಿಯನ್ನು ಅದು ದಯಪಾಲಿಸುತ್ತದೆ.
ಅಥರ್ವವೇದವು ಬಿಲ್ವವನ್ನು ಮಹಾನ್ ವೈ ಭದ್ರೋ ಬಿಲ್ವಃ - ಅಂದರೆ ಬಿಲ್ವ ಉತ್ತಮವಾದುದು ಮತ್ತು ಶ್ರೇಷ್ಠವಾದುದು ಎಂದು ವರ್ಣಿಸುತ್ತದೆ.
ಯಾಗದಲ್ಲಿ ಉಪಯೋಗಿಸುವ ಸಲಕರಣೆಗಳು ಮತ್ತು ಪಾತ್ರೆಗಳನ್ನು ಮಾಡಲು ಉಪಯೋಗಿಸಲಾಗುತ್ತದೆ.
ಬಿಲ್ವವು ಒಂದು ಯಾಗ-ವೃಕ್ಷ ಮತ್ತು ಅದನ್ನು ಬಹಳವಾಗಿ ಯಜ್ಞಗಳಿಗೆ ಪಾತ್ರೆಗಳು ಮತ್ತು ಸಲಕರಣೆಗಳನ್ನು ಮಾಡಲು ಉಪಯೋಗಿಸಲಾಗುತ್ತದೆ.
ಈ ಉದ್ದೇಶ್ಯಕ್ಕಾಗಿ ಉಪಯೋಗಿಸುವ ಇತರ ಮರಗಳೆಂದರೆ: ಅಶ್ವತ್ಥ (Ficus religiosa), ಉದುಂಬರ (Ficus glomerata), ಕಾರ್ಶ್ಮರ್ಯ (Gmelina arborea), ಖಾದಿರ (Acacia catechu), ಪಲಾಶ (Butea frondosa), ವೈಕಂಕತ (Flacourtia sapida), and ಶಮೀ (Prosopis spicigera)
ಬಿಲ್ವವನ್ನು ಬಲಿಸ್ತಂಭ, ದಂಡ ಮತ್ತು ಶುಕ್ರಪಾತ್ರವನ್ನು ಮಾಡಲು ಉಪಯೋಗಿಸುತ್ತಾರೆ. ಅವುಗಳನ್ನು ಪರಿಧಿಗಾಗಿ ಮತ್ತು ಸಮಿತ್ತುಗಳಿಗಾಗಿಯೂ ಉಪಯೋಗಿಸುತ್ತಾರೆ.
ಹಲವಾರು ಧಾರ್ಮಿಕ ಆಚರಣೆಗಳಲ್ಲಿ ಅನ್ನವನ್ನು ಮಾಡುವ ಪಾತ್ರೆಯು ಬಿಲ್ವದ ಹಣ್ಣಿನ ಆಕಾರದಲ್ಲಿರುತ್ತದೆ. ಏಕೆಂದರೆ ಬಿಲ್ವದ ದೈವಿಕ ಗುಣಗಳು ಅಕ್ಕಿಗೆ ವರ್ಗಾಹಿಸಲೆಂಬುದು ಅದರ ಉದ್ದೇಶ್ಯ.
ಶ್ರೀಫಲ-ಕೃಚ್ಛ್ರ ಎಂಬ ಒಂದು ವ್ರತದಲ್ಲಿ, ವ್ರತವನ್ನು ಮಾಡುವವರು ಒಂದು ಬಿಲ್ವಮರದ ಕೆಳಗೆ ಕುಳಿತಿರುವ ಲಕ್ಷ್ಮಿದೇವಿಯನ್ನು ಆರಾಧಿಸುತ್ತಾರೆ. ಅವರು ಮರದ ಕೆಳಗಡೆ ಮಲಗುತ್ತಾರೆ ಮತ್ತು ಕೇವಲ ಬಿಲ್ವದ ಹಣ್ಣನ್ನು ಆಹಾರವಾಗಿ ಸ್ವೀಕರಿಸುತ್ತಾರೆ.
ಬಿಲ್ವವನ್ನು ರಕ್ಷಾ ತಾಯಿತಗಳನ್ನು ಮಾಡಲು ಉಪಯೋಗಿಸುತ್ತಾರೆ.
ಬಿಲ್ವವು ಎಷ್ಟು ಮಹತ್ತರವಾದುದೆಂದರೆ ಅದರ ಬಗ್ಗೆ ಒಂದು ಉಪನಿಷತ್ ಇದೆ. ಬಿಲ್ವೋಪನಿಷತ್ ನಲ್ಲಿ ಭಗವಾನ್ ಶಿವ ತಾನೇ ಋಷಿ ವಾಮದೇವರಿಗೆ ಬಿಲ್ವದ ಮಹತ್ವವನ್ನು ಉಪದೇಶಿಸುತ್ತಾನೆ.
ಬಿಲ್ವದ ಎಡ ಎಲೆಯ ಮೇಲೆ ಬ್ರಹ್ಮ, ಬಲದಲ್ಲಿ ವಿಷ್ಣು ಮತ್ತು ಮಧ್ಯದ ಎಲೆಯ ಮೇಲೆ ಶಿವ ವಾಸಿಸುತ್ತಾರೆ. ಬೇರೆ ಎಲ್ಲಾ ದೇವತೆಗಳು ಬಿಲ್ವದ ಎಲೆಯ ತೊಟ್ಟಿನಲ್ಲಿ ವಾಸಿಸುತ್ತಾರೆ.
ಒಂದೇ ತೊಟ್ಟಿನಲ್ಲಿ ಕೂಡಿರುವ ಮೂರು ಎಲೆಗಳು ಕೆಳಕಂಡ ಮೂರು ವಿಚಾರಗಳನ್ನು ಪ್ರತಿನಿಧಿಸುತ್ತವೆ:
1. ಮೂವರು ತ್ರಿಮೂರ್ತಿಗಳೂ ಒಂದೇ ಪರಮಸತ್ಯದ ವಿವಿಧ ಅಂಶಗಳಾಗಿದ್ದಾರೆ.
2. ಸತ್ವ, ರಜಸ್ಸು ಮತ್ತು ತಮೋಗುಣಗಳು ಪರಸ್ಪರ ಸಂಬಂಧಿಸಿವೆ.
3. ಇಚ್ಚಾ-ಶಕ್ತಿ, ಜ್ಞಾನ-ಶಕ್ತಿ ಮತ್ತು ಕ್ರಿಯಾ-ಶಕ್ತಿಗಳು ಪರಸ್ಪರ ಸಂಬಂಧಿಸಿವೆ.
ಬಿಲ್ವಪತ್ರೆಯ ಹಿಂಭಾಗದಲ್ಲಿ ಅಮೃತವಿದೆ. ಆದುದರಿಂದ ಶಿವನಿಗೆ ಬಿಲ್ವಾರ್ಚನೆಯನ್ನು ಮಾಡುವಾಗ, ಎಲೆಯು ಮೇಲಕ್ಕೆ ಮುಖ ಮಾಡಿರಬೇಕು. ಹಿಂಭಾಗವು ಲಿಂಗ/ಮೂರ್ತಿಯನ್ನು ಮುಟ್ಟಿರಬೇಕು.
ಭಗವಾನ್ ಶಿವನು ಬಿಲ್ವವನ್ನು ಅರ್ಪಿಸದಿದ್ದರೆ ತನ್ನ ಆರಾಧನೆಯು ಅಪೂರ್ಣವೆಂದು ಹೇಳುತ್ತಾನೆ. ಬಿಲ್ವಪತ್ರೆಯೊಂದಿಗೆ ಆರಾಧಿಸುವುದರಿಂದ ಸೌಕರ್ಯ, ಸಂತೋಷ ಮತ್ತು ಮೋಕ್ಷವು ದೊರಕುತ್ತದೆ. ಅದು ಎಲ್ಲಾ ಪಾಪಗಳಿಂದ ವಿಮುಕ್ತಿಯನ್ನು ನೀಡುತ್ತದೆ.
ಭಗವಾನ್ ಶಿವನನ್ನು ಬಿಲ್ವಪತ್ರೆಯಿಂದ ಪೂಜಿಸುವುದರಿಂದ ತೀರ್ಥಯಾತ್ರೆಗಳು, ದಾನ, ತಪಸ್ಸು, ಯಾಗಗಳನ್ನು ಮಾಡುವ ಮತ್ತು ವೇದಗಳನ್ನು ಕಲಿಯುವುದರಿಂದ ಸಿಗುವ ಫಲಿತಾಂಶಗಳನ್ನು ಕೊಡುತ್ತದೆ.
ಲಕ್ಷ್ಮಿದೇವಿಯು ಬಿಲ್ವವೃಕ್ಷದಲ್ಲಿ ವಾಸಿಸುತ್ತಾಳೆ. ಬಿಲ್ವದ ಹಣ್ಣನ್ನು ಶ್ರೀ-ಫಲವೆಂದು ಕರೆಯುತ್ತಾರೆ.
ತವ ವೃಕ್ಷೋಽಥ ಬಿಲ್ವಃ ತಸ್ಯ ಫಲಾನಿ ತಪಸಾ ನುದಂತು- ಎಂದು ಶ್ರೀಸೂಕ್ತವು ಹೇಳುತ್ತದೆ. ಬಿಲ್ವದ ಹಣ್ಣುಗಳಿಗೆ ಅಡೆತಡೆಗಳನ್ನು ತೆಗೆದುಹಾಕುವ ಶಕ್ತಿಯು ಇದೆ. ಲಕ್ಷ್ಮಿದೇವಿಯನ್ನು ಪ್ರಸನ್ನಗೊಳಿಸಲು ಮಾಡುವ ಹೋಮವನ್ನು ಬಿಲ್ವದ ಹಣ್ಣುಗಳಿಂದ ನಿರ್ವಹಿಸುತ್ತಾರೆ.
ಅನುವಾದ: ಡಿ.ಎಸ್.ನರೇಂದ್ರ
Please wait while the audio list loads..
Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints